Publish Date: Tue, 25 Sep 2018 (16:26 IST)
Updated Date: Tue, 25 Sep 2018 (16:29 IST)
ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ನಟ ದರ್ಶನ್ ಡಿಸ್ಟ್ಯಾರ್ಜ್ ಬಗ್ಗೆ ಮಾಹಿತಿಯನ್ನು ನಟನ ಗೆಳೆಯ ಸೃಜನ್ ಲೋಕೇಶ್ ಹೇಳಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ದರ್ಶನ್ ಭೇಟಿ ಮಾಡಿದ ಬಳಿಕ ಮಾತನಾಡಿದ ಸೃಜನ್ ಲೋಕೇಶ್, ದೇವರ ದಯದಿಂದ ಯಾರಿಗೂ ಏನು ಆಗಿಲ್ಲ. ಆಕ್ಸಿಡೆಂಟ್ ನಮಗೆ ಗೊತ್ತಿಲ್ಲದೆ ಆಗೋದು. ಪ್ರಜ್ವಲ್ ದೇವರಾಜ್ ಮತ್ತು ದೇವರಾಜು ನಾಳೆ ಡಿಸ್ಟ್ಯಾರ್ಜ್ ಆಗುತ್ತಾರೆ. ದರ್ಶನ್ ನಾಳೆ ರಾತ್ರಿ ಅಥವಾ ನಾಡಿದ್ದು ಬೆಳಗ್ಗೆ ಡಿಸ್ಟ್ಯಾರ್ಜ್ ಆಗ್ತಾರೆ. ವೈದ್ಯರು ನಮ್ಮೊಟ್ಟಿಗೆ ಹೇಳಿದ್ದು,
ಈಗಾಗಲೇ ಎಲ್ಲ ಸರ್ಜರಿ ಮುಗಿದಿದೆ ಎಂದರು.
ನಟ ದರ್ಶನ್ ಮಲಗಿ ರೆಸ್ಟ್ ಮಾಡ್ಬೇಕು. ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ. ಯಾರಾದ್ರು ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ ಎಂದು ಮೈಸೂರಿನಲ್ಲಿ ನಟ ಸೃಜನ್ ಲೋಕೇಶ್ ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ನಟ ದರ್ಶನ್ ನೋಡಲು ಆಸ್ಪತ್ರೆಗೆ ಮಾಜಿ ಸಚಿವ ಹೆಚ್.ಆಂಜನೇಯ ಹಾಗೂ ನಟ ವಿನೋದ್ ಪ್ರಭಾಕರ್ ಸೇರಿದಂತೆ ಇತರರು ಭೇಟಿ ನೀಡಿದ್ದರು.