Publish Date: Wed, 01 Apr 2020 (09:32 IST)
Updated Date: Wed, 01 Apr 2020 (09:33 IST)
ಬೆಂಗಳೂರು: ಕೊರೋನಾ ವೈರಸ್ ತಡೆಗಟ್ಟಲು ಕೇಂದ್ರ ಹೇರಿರುವ 21 ದಿನಗಳ ಲಾಕ್ ಡೌನ್ ಮುಗಿದರೆ ಸಾಕು. ಮತ್ತೆ ಮೊದಲಿನಂತೆ ಆರಾಮವಾಗಿರಬಹುದು ಎಂದು ನೀವು ಲೆಕ್ಕಾಚಾರ ಹಾಕಿದ್ದರೆ ತಪ್ಪಾಗುತ್ತದೆ.
ಸಮಸ್ಯೆಗಳು ಆರಂಭವಾಗುವುದೇ ಅಲ್ಲಿಂದ. ಲಾಕ್ ಡೌನ್ ಮುಗಿದ ತಕ್ಷಣವೇ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯಬಹುದು. ಆದರೆ ಎಲ್ಲವೂ ಮೊದಲಿನಿಂದ ಆರಂಭವಾಗಬೇಕು.
ವಸ್ತುಗಳ ಸಾಗಣೆ, ಅಂಗಡಿಗಳಿಗೆ ತಲುಪಲು ಮತ್ತೆ ಒಂದು ವಾರ ಬೇಕಾಗಬಹುದು. ಎಲ್ಲವೂ ಸಹಜ ಸ್ಥಿತಿಗೆ ಬರಲು ಮತ್ತಷ್ಟು ದಿನ ಬೇಕಾಗುತ್ತದೆ. ಇಷ್ಟು ದಿನ ಬಾಕಿ ಮಾಡಿದ್ದ ವ್ಯವಹಾರಗಳನ್ನೆಲ್ಲಾ ಪೂರ್ತಿ ಮಾಡಲು ಮಾರುಕಟ್ಟೆಗಳಲ್ಲಿ, ಇತರ ಕ್ಷೇತ್ರಗಳಲ್ಲಿ ಜನರು ಮುಗಿಬೀಳುವುದು ಸಾಮಾನ್ಯ. ಇದರಿಂದಾಗಿ ಯಾವುದೇ ಕೆಲಸ ಮಾಡಬೇಕಾದರೂ ಮಾರುದ್ದದ ಸಾಲು ನಿಲ್ಲುವುದು ಸಾಮಾನ್ಯವಾಗಲಿದೆ. ಹೀಗಾಗಿ ಇನ್ನೂ ಒಂದಷ್ಟು ದಿನ ನಿಮ್ಮ ತಾಳ್ಮೆ ಪರೀಕ್ಷೆ ನಡೆಯಲಿದೆ.