Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಉತ್ಪಾದಿತ ಕೋವ್ಯಾಕ್ಸಿನ್ ಗುಣಮಟ್ಟ ಕಳಪೆ!

Webdunia
ಬುಧವಾರ, 4 ಆಗಸ್ಟ್ 2021 (16:39 IST)
ನವದೆಹಲಿ(ಆ.04): ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ತನ್ನ ಬೆಂಗಳೂರು ಘಟಕದಲ್ಲಿ ಉತ್ಪಾದಿಸಿದ್ದ ಕೋವ್ಯಾಕ್ಸಿನ್ ಲಸಿಕೆಯ ಮೊದಲ 2 ಬ್ಯಾಚ್ಗಳು ನಿರ್ದಿಷ್ಟಗುಣಮಟ್ಟಹೊಂದಿರಲಿಲ್ಲ. ಹೀಗಾಗಿ ನಿಗದಿತ ಪ್ರಮಾಣದಲ್ಲಿ ಕೋವಿಡ್ ಲಸಿಕೆ ವಿತರಣೆ, ಪೂರೈಕೆ ಸಾಧ್ಯವಾಗಲಿಲ್ಲ ಎಂದು ಕೇಂದ್ರ ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ.ಎನ್.ಕೆ.ಅರೋರಾ ತಿಳಿಸಿದ್ದಾರೆ.

* ಗುಣಮಟ್ಟಪರೀಕ್ಷೆಯಲ್ಲಿ 2 ಕೋವ್ಯಾಕ್ಸಿನ್ ಬ್ಯಾಚ್ ವಿಫಲ
* ಬೆಂಗಳೂರಿನಲ್ಲಿ ಉತ್ಪಾದಿತ ಕೋವ್ಯಾಕ್ಸಿನ್ ಗುಣಮಟ್ಟಕಳಪೆ
* ಇದರಿಂದ ಲಸಿಕೆ ಪೂರೈಕೆಯಲ್ಲಿ ತೀವ್ರ ಹಿನ್ನಡೆ
* ಹೊಸ ಬ್ಯಾಚ್ ತೃಪ್ತಿಕರ, ಇನ್ನು ಪೂರೈಕೆ ತೀವ್ರ
* ಕೇಂದ್ರ ಕೋವಿಡ್ ಲಸಿಕೆ ವಿಭಾಗದ ಅಧ್ಯಕ್ಷ ಅರೋರಾ ಹೇಳಿಕೆ
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು ‘ಭಾರತ್ ಬಯೋಟೆಕ್, ಬೆಂಗಳೂರಲ್ಲಿ ಅತಿದೊಡ್ಡ ಉತ್ಪಾದನಾ ಘಟಕವನ್ನು ಇತ್ತೀಚೆಗೆ ಆರಂಭಿಸಿತ್ತು. ಇದರಿಂದಾಗಿ ಲಸಿಕೆ ಪೂರೈಕೆ ತೀವ್ರಗೊಳ್ಳಬಹುದು ಎಂದು ಆಶಿಸಲಾಗಿತ್ತು. ಆದರೆ ಮೊದಲ 2 ಬ್ಯಾಚ್ಗಳು ಗುಣಮಟ್ಟಪರೀಕ್ಷೆಯಲ್ಲಿ ವಿಫಲವಾದವು. ಆದರೆ ಈಗ 3 ಹಾಗೂ 4ನೇ ಬ್ಯಾಚ್ ಲಸಿಕೆಗಳು ಬಂದಿದ್ದು, ಗುಣಮಟ್ಟಪರೀಕ್ಷೆಯಲ್ಲಿ ಉತ್ತಮವಾಗಿದ್ದು ಕಂಡುಬಂದಿವೆ. ಇವುಗಳನ್ನು ಈಗ ಲಸಿಕಾಕರಣಕ್ಕೆ ಕಳಿಸಲಾಗಿದೆ. ಮುಂದಿನ 4ರಿಂದ 6 ವಾರದಲ್ಲಿ ಉತ್ಪಾದನೆ ತೀವ್ರಗೊಳಿಸಿ ಪೂರೈಕೆ ಸುಧಾರಿಸಲಾಗುತ್ತದೆ’ ಎಂದಿದ್ದಾರೆ. ಇದೇ ವೇಳೆ, ‘ಗುಣಮಟ್ಟಪರೀಕ್ಷೆಯಲ್ಲಿ ವಿಫಲವಾದ ಲಸಿಕೆ ಬ್ಯಾಚ್ಗಳನ್ನು ಜನರಿಗೆ ಲಸಿಕೆ ನೀಡಲು ಪೂರೈಸಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತಕ್ಕೆ 1 ತಿಂಗಳಿಗೆ 30 ಕೋಟಿ ಡೋಸ್ ಲಸಿಕೆ ಅಗತ್ಯವಿದೆ. ಇದರಿಂದ ದಿನಕ್ಕೆ 1 ಕೋಟಿ ಮಂದಿಗೆ ಲಸಿಕೆ ನೀಡಿದಂತಾಗುತ್ತದೆ. ಡಿಸೆಂಬರ್ ಒಳಗೆ ದೇಶದ ಎಲ್ಲ ಅರ್ಹ ಜನರಿಗೆ ಲಸಿಕೆ ನೀಡಿಕೆ ಇದರಿಂದ ಸಾಧ್ಯವಾಗಲಿದೆ ಎಂದು ಡಾ| ಅರೋರಾ ಹೇಳಿದ್ದಾರೆ.
ಫೈಜರ್, ಮಾಡೆರ್ನಾ ಪಟ್ಟು:
ಭಾರತಕ್ಕೆ ಬರಲು ಇಚ್ಛಿಸುತ್ತಿರುವ ವಿದೇಶಿ ಲಸಿಕೆಗಳಾದ ಫೈಜರ್ ಹಾಗೂ ಮಾಡೆರ್ನಾ, ‘ನಷ್ಟಪರಿಹಾರ ಷರತ್ತು’ ಸಡಿಲಿಸಬೇಕು ಎಂದು ಮನವಿ ಮಾಡುತ್ತಿವೆ. ಇದಕ್ಕೆ ಸರ್ಕಾರ ಒಪ್ಪದ ಕಾರಣ, ಅವುಗಳ ಪೂರೈಕೆ ಆರಂಭವಾಗಿಲ್ಲ. ಅದೂ ಅಲ್ಲದೆ ಪ್ರತಿ ಕಂಪನಿ ಪೂರೈಸಲು ಮುಂದಾಗಿರುವುದು ಅಂದಾಜು ಕೇವಲ 7 ಕೋಟಿ. 135 ಕೋಟಿ ಜನರಿಗೆ ಬೇಕಾಗಿರುವ ಪ್ರಮಾಣಕ್ಕೆ ಇದು ತೀರಾ ಕಡಿಮೆ. ಒಂದು ವೇಳೆ ಪ್ರತಿ ಕಂಪನಿ 10-20 ಕೋಟಿ ಡೋಸ್ಗೆ ಒಪ್ಪಿದರೆ ಆಗ ವಿನಾಯ್ತಿ ಬಗ್ಗೆ ಸರ್ಕಾರ ಯೋಚಿಸಬಹುದು ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನ ಪರ ಬೇಹುಗಾರಿಗೆ: ಎನ್‌ಐಎಯಿಂದ ಯೂಟ್ಯೂಬರ್‌ ಜ್ಯೋತಿಗೆ ನಾನಾ ರೀತಿಯಲ್ಲಿ ಪ್ರಶ್ನೆ

ಕನ್ನಡ ಮಾತೇ ಆಡಲ್ಲ, ಹಿಂದಿ ರಾಷ್ಟ್ರ ಭಾಷೆ ಏನಿವಾಗ? SBI ಅಧಿಕಾರಿಯ ದರ್ಪ: video

Pahalgam Attack, ಅಂದು ಮೋದಿ ಎಚ್ಚರಿಕೆ ನೀಡುತ್ತಿದ್ದರೆ 26 ಮಂದಿಯ ಜೀವ ಉಳಿಯುತ್ತಿತ್ತು: ಮಲ್ಲಿಕಾರ್ಜುನ ಖರ್ಗೆ

ಅಂದು ನಾವು ನೀಡಿದ ಅನುದಾನದಲ್ಲಿ ಕಾಮಗಾರಿ ಮಾಡ್ತಿದ್ರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ: ಆರ್‌ ಅಶೋಕ್‌

IMD, ಕೇರಳಕ್ಕೆ ನಾಲ್ಕೈದು ದಿನಗಳಲ್ಲಿ ಮುಂಗಾರು ಪ್ರವೇಶ

ಮುಂದಿನ ಸುದ್ದಿ
Show comments