Publish Date: Sun, 16 Jul 2023 (12:23 IST)
Updated Date: Sun, 16 Jul 2023 (13:29 IST)
ಫಿಲ್ಮಿ ಸ್ಟೈಲ್ ನಲ್ಲಿ ಚೇಸ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ಭೇಟೆಯಾಡಿದ್ದಾರೆ.ಮಹಾಂತೇಗೌಡ ಎಂಬಾತನನ್ನು ಚೇಸಿಂಗ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ.ಕೆ.ಜಿ ಸರ್ಕಲ್ ಬಳಿಯಿರುವ ತಾಹಶಿಲ್ದಾರ್ ಆಫೀಸ್ ನಲ್ಲಿ ಫುಡ್ ಇನ್ಸ್ಪೆಕ್ಟರ್ ಮಹಾಂತೇ ಗೌಡ ಆಗಿದ್ದು,ರಂಗದಾಮಯ್ಯ ಎಂಬುವವರ ಬಳಿಯಲ್ಲಿ ಲಂಚಕ್ಕೆ ಮಹಾಂತೇ ಗೌಡ ಬೇಡಿಕೆ ಇಟ್ಟಿದ್ದ,ಟ್ರೇಡ್ ಲೈಸೆನ್ಸ್ ಗಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದುಒಂದು ಲಕ್ಷ ಹಣವನ್ನು ಲಂಚವನ್ನಾಗಿ ಕೇಳಿದ್ದ.43 ಸಾವಿರ ಹಣವನ್ನು ಪಡೆಯುವಾಗ ಟ್ರ್ಯಾಪ್ ಮಾಡೋದಕ್ಕೆ ಲೋಕಾಯುಕ್ತ ಟೀಂ ತೆರಳಿದ್ರು.
ಆಗ ಹಣ ಪಡೆದು ಎಸ್ಕೇಪ್ ಆಗಲು ಯತ್ನ ನಡೆಸಿದ್ದು,ಲೋಕಾಯುಕ್ತ ಟ್ರ್ಯಾಪ್ ಇದು ಎಂದು ಗೊತ್ತಾಗಿ ಎಸ್ಕೇಪ್ ಆಗ್ತದ್ದಂತೆ ಸುಮಾರು 15 ಕಿ.ಲೋ ಮೀಟರ್ ಚೇಸ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ಮಹತೇಶ್ ಗೌಡನನ್ನ ಹಿಡಿದಿದ್ದಾರೆ.ನೆಲಮಂಗಲ ಬಳಿಯ ಸೊಂಡೇಕೊಪ್ಪ ಬಳಿ ತಗಲಾಕಿಕೊಂಡ ಫುಡ್ ಇನ್ಸ್ಪೆಕ್ಟರ್ ಲೋಕಾಯುಕ್ತ ಪೊಲೀಸರಿಂದ ಮಹಾಂತೇಗೌಡ ವಶಕ್ಕೆ ಪಡೆದು ವಿಚಾರಣೆ ನಡರಸಲಾಗ್ತಿದೆ.