Publish Date: Sat, 15 Aug 2020 (22:42 IST)
Updated Date: Sat, 15 Aug 2020 (22:44 IST)
ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಟಕವನ್ನಾಡುತ್ತಿದೆ.
ಹೀಗಂತ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ ತೀವ್ರವಾಗಿ ಖಂಡಿಸಿದ್ದಾರೆ.
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸುವ ಕಾಂಗ್ರೆಸ್ ವಿರುದ್ಧ ಸಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ರೈತರಿಗೆ ಸ್ವಯಂ ಅಧಿಕಾರ ಸರ್ಕಾರ ಕೊಟ್ಟಿದೆ. ಯಾರು ಬೇಕಾದರೂ, ಎಲ್ಲಿ ಬೇಕಾದರೂ ಭೂಮಿ ಕೊಂಡುಕೊಳ್ಳಬಹುದು. ಇದು ಮರಣ ಶಾಸನ ಅಲ್ಲಾ ರೈತನಿಗೆ ಕೊಟ್ಟ ವಿಶೇಷ ಅಧಿಕಾರ ಎಂದರು. ಆದರೆ ಕಾಂಗ್ರೆಸ್ ನವರಿಗೆ ಹೇಳೊಕೆ ಬೇರೆ ಏನು ಮಾತಿಲ್ಲ ಕೇವಲ ನಾಟಕೀಯ ಮಾತನಾಡುತ್ತಿದ್ದಾರೆ೦ದು ಸಚಿವ ಪಾಟೀಲ ಖ೦ಡಿಸಿದ್ದಾರೆ.