Publish Date: Fri, 19 May 2023 (18:22 IST)
Updated Date: Fri, 19 May 2023 (19:27 IST)
ಸಿದ್ದರಾಮಯ್ಯ ಸಿಎಂ.ಡಿಕೆಸಿ ಡಿಸಿಎಂ ಆಯ್ಕೆ ಹಿನ್ನೆಲೆ ಕಾಂಗ್ರೆಸ್ ಕಚೇರಿ ಮುಂಭಾಗ ಕಾರ್ಯಕರ್ತ ಜಮಾವಣೆಗೊಂಡಿದ್ದಾರೆ.ಡಿಕೆಸಿ ಹಾಗೂ ಸಿದ್ದರಾಮಯ್ಯ ಅವರಿಗೆ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ.ಕೆಪಿಸಿಸಿ ಕಚೇರಿ ಮುಂಭಾಗ ಕಾರ್ಯಕರ್ತರು ಜೈಕಾರ ಹಾಕಿದ್ರು.
ಅಲ್ಲದೇ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿ ವಿದ್ಯುತ್ ದೀಪದಿಂದ ಅಲಂಕಾರಗೊಂಡಿದೆ.ಕಾಂಗ್ರೆಸ್ ಅಧಿಕಾರ ಬರುತ್ತಿದ್ದಂತೆ ಕಾಂಗ್ರೆಸ್ ಕಚೇರಿ ಶೃಂಗಾರ ಗೊಂಡಿದೆ.ಲೈಟಿಂಗ್ನಿಂದ ಕಾಂಗ್ರೆಸ್ ಕಚೇರಿ ಕಂಗೊಳಿಸುತ್ತಿದೆ.