Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯನವರ ಮನವೊಲಿಸಲು ಹೈಕಮಾಂಡ್ ಮುಂದೆ ಇರುವುದು ಇದೊಂದೇ ಅಸ್ತ್ರ

Siddaramaiah-DK Shivakumar-Randeep Surjewala
ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆ ವಿಚಾರ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು ಸಿದ್ದರಾಮಯ್ಯ ಮನವೊಲಿಸಬೇಕೆಂದರೆ ಹೈಕಮಾಂಡ್ ಮುಂದೆ ಇರುವುದು ಇದೊಂದೇ ಅಸ್ತ್ರ ಎನ್ನಲಾಗುತ್ತಿದೆ.

ಸಿದ್ದರಾಮಯ್ಯನವರ ಕೈಯಿಂದ ಸಿಎಂ ಹುದ್ದೆಯನ್ನು ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಕಾರಣ ಅವರಿಗಿರುವ ಶಾಸಕರ ಬೆಂಬಲ. ಸಿದ್ದರಾಮಯ್ಯ ಅಹಿಂದ ಪ್ರಬಲ ನಾಯಕ. ಅವರ ಅಸಮಾಧಾನಕ್ಕೊಳಗಾದರೆ ಕಾಂಗ್ರೆಸ್ ಕೂಡಾ ಕರ್ನಾಟಕದಲ್ಲಿ ಸಂಕಷ್ಟಕ್ಕೆ ಸಿಲುಕಲಿದೆ.

ಹೀಗಾಗಿ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆಯಿಡಲಿದೆ. ಮೂಲಗಳ ಪ್ರಕಾರ ಸಿಎಂ ಬದಲಾವಣೆ ಮಾಡಬೇಕಾದರೆ ಸಿದ್ದರಾಮಯ್ಯನವರನ್ನು ಮನವೊಲಿಸಲು ಹೈಕಮಾಂಡ್ ನಾಯಕರು ಬಿಗ್ ಆಫರ್ ಮುಂದಿಡಲಿದ್ದಾರೆ.

ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು ಸಿದ್ದರಾಮಯ್ಯನವರಿಗೆ ರಾಜ್ಯಸಭೆ ಸ್ಥಾನದ ಆಫರ್ ನೀಡಬಹುದು. ಆದರೆ ಇಷ್ಟೇ ಅಲ್ಲ, ಇದರ ಜೊತೆಗೆ ಪುತ್ರನಿಗೆ ಕರ್ನಾಟಕದಲ್ಲಿ ಸಚಿವ ಸ್ಥಾನದ ಆಫರ್ ನೀಡಬಹುದು. ಇದರಿಂದ ಪುತ್ರ ಯತೀಂದ್ರ ಭವಿಷ್ಯವೂ ಕರ್ನಾಟಕದಲ್ಲಿ ಭದ್ರವಾಗಲಿದೆ. ಈ ಆಫರ್ ಗಳಿಗೆ ಒಪ್ಪಿದರೆ ಸಿಎಂ ಬದಲಾವಣೆ ಹಾದಿ ಸುಗಮವಾಗಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ದೆಹಲಿಯಿಂದ ಬಂದ ತಕ್ಷಣ ಹೀಗೆ ಮಾಡಿದ್ರೆ ಸಿಎಂ ಬದಲಾವಣೆ ಪಕ್ಕಾ ಎಂದರ್ಥ