Publish Date: Mon, 08 May 2023 (16:39 IST)
Updated Date: Mon, 08 May 2023 (16:43 IST)
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ಗಂಟೆಗಳು ಮಾತ್ರ ಬಾಕಿ ಹಾಗಾಗಿ ಎಲ್ಲ ರಾಜಕೀಯ ನಾಯಕರು ಕೊನೇಕ್ಷಣದ ಭರ್ಜರಿಯಾಗಿ ನಡೆಸುತ್ತಿದ್ದಾರೆ.ಕಸರತ್ತು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇಶವಮೂರ್ತಿ ಭರ್ಜರಿ ಮತಯಾಚನೆ ನಡೆಸಿದ್ರು. ಮಹಾಲಕ್ಷ್ಮಿ ಲೇಔಟ್ ವಿವಿಧ ವಾರ್ಡ್ ಗಳಲ್ಲಿ ಬೈಕ್ ರಾಲಿ ಮೂಲಕ ಮತಯಾಚನೆ ಮಾಡಿದ್ರು..ನೂರಾರು ಕಾರ್ಯಕರ್ತರು ಹಾಗೂ ಇಲ್ಲಿನ ಮತದಾರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕಾರ್ಯಕರ್ತರು ಹಾಗೂ ಬೆಂಬಲಿಗರು ಅಭ್ಯರ್ಥಿ ಪರ ಮತಯಾಚನೆ ನಡೆಸಿ ಈ ಬಾರಿ ಮತ್ತೊಮ್ಮೆ ಕಾಂಗ್ರೆಸ್ ಜಯಗಳಿಸಿ ಎಂದು ಮನವಿ ಮಾಡಿದ್ರು. ಇನ್ನು ಇದೇ ವೇಳೆ ಮಾಜಿ ಕಾರ್ಪೊರೇಟರ್ ಆದ ಶಿವರಾಜ್ ಅವರು ಕೇಶವಮೂರ್ತಿಯವರ ಪರ ಮತಯಾಚನೆ ಮಾಡಿದ್ರು...ಬಳಿಕ ಮಾತನಾಡಿದ ಅವರು,ಮಹಾಲಕ್ಷ್ಮಿ ಲೇಔಟ್ ನ ಜನರು ಬದಲಾವಣೆ ಬಯಸುತ್ತಿದ್ದಾರೆ ಹಾಗಾಗಿ ಈ ಬಾರಿ ಮಹಾಲಕ್ಷ್ಮಿ ಲೇಔಟ್ ನಲ್ಲಿ ಕೇಶವಮೂರ್ತಿಯವರು ಗೆಲುವನ್ನು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.