Webdunia - Bharat's app for daily news and videos

Install App

ಮೋದಿ ತಾಯಿ ನಿಧಾನಕ್ಕೆ ಸಿಎಂ ಸಂತಾಪ

Webdunia
ಶುಕ್ರವಾರ, 30 ಡಿಸೆಂಬರ್ 2022 (15:37 IST)
ನಮ್ಮ‌ ನೆಚ್ಚಿನ ಪ್ರಧಾನಿ ಮೋದಿಯವರ ತಾಯಿ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ರು.ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
 
ತುಂಬಾ ಬೇಸರದ ವಿಚಾರ ಇದು.ನರೇಂದ್ರ ಮೋದಿ ಸಿಎಂ‌ ಆಗಿದ್ದಾಗ ತಾಯಿಗೆ ತೋರಿಸಿರೋ ಪ್ರೀತಿ ಮತ್ತು ಅವರ ತಾಯಿ ಮೋದಿಜಿಗೆ ತೋರಿಸಿದ ಮಮತೆ ನಾವೆಲ್ಲಾ ನೋಡೋಕೆ ಅವಕಾಶ ಸಿಕ್ಕಿತ್ತು.ಮೋದಿಜಿ ಕೂಡ ಹೇಳಿದ್ರು.ನಮ್ಮ ತಾಯಿ ಸರಳ ಮತ್ತು ವಿಶೇಷ ಅಂತಾ.ಮೋದಿಜಿ ಮತ್ತು ಅವರ ತಾಯಿ ಸಂಬಂಧ ದೇಶಕ್ಕೆ ಒಂದು ರೀತಿ ಆದರ್ಶ.ಈ ವಯಸ್ಸಲ್ಲೂ ಅವರು ತಮ್ಮ ಮಗನಿಗೆ ತಾಯಿಯ ಕರ್ತವ್ಯ ಮೆರೆದಿದ್ದಾರೆ‌‌.ಆ ತಾಯಿಯ ಮದರ್ಹುಡ್ ಏನು ಅನ್ನೋದನ್ನ ತೋರಿಸುತ್ತೆ.ಮೋದಿಜಿಯವರಿಗೆ ದೇಶಭಕ್ತಿಯನ್ನ ತುಂಬಿಕೊಟ್ಟಿದ್ದಾರೆ.ಇವತ್ತು ಅದನ್ನ ನಾವು ಮೋದಿಯವರಲ್ಲಿ ನೋಡ್ತೀವಿ.ಮೋದಿಜಿ ಅವರನ್ನ ಭೇಟಿ ಆದಾಗ ಊಟ ಮಾಡಿಸಿದ್ದಾರೆ.
 
ಅವರ ಕರ್ತವ್ಯ ಮರೆತಿರಲಿಲ್ಲ.ಮೋದಿಜಿ ಕೂಡ ಅವರ ತಾಯಿಗೆ ತೋರಿದ ಗೌರವ.ಅವರ ಜೊತೆ ನಡೆದುಕೊಂಡ ಆದರ್ಶ ಇಡೀ ದೇಶಕ್ಕೆ ಮಾದರಿ.ತಾಯಿ ಮಕ್ಕಳು, ಅಣ್ಣ ತಮ್ಮಂದಿರ ಸಂಬಂಧ ನಮ್ಮ ದೇಶದ ಒಂದು ಸಂಸ್ಕೃತಿ.ಮೋದಿಜಿ ಅವರ ತಾಯಿ ತಮ್ಮ ಕರ್ತವ್ಯ ಮುಗಿಸಿ ಆದರ್ಶವಾಗಿದ್ದಾರೆ.ಮೋದೀಜಿ ಕೂಡ ಅವರ ಕರ್ತವ್ಯ ಮಾಡ್ತಿದ್ದಾರೆ.ಮೋದಿಜಿ ಒಮ್ಮೆ ಕರ್ಮಯೋಗಿ  ಬಗ್ಗೆ  ಹೇಳಿದ್ರು.ಈಗ ಮೋದಿಜಿ ಕೂಡ ಓರ್ವ ಕರ್ಮಯೋಗಿ.ಅವರ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ.ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳೋ ಶಕ್ತಿ ಕೊಡಲಿ ಎಂದು ಸಿಎಂ ಬೊಮ್ಮಾಯಿ‌ ಸಂತಾಪ ಸೂಚಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments