Webdunia - Bharat's app for daily news and videos

Install App

ನಗರದ ಶುಚಿತ್ವಕ್ಕಾಗಿ ನಾಗರೀಕರ ಪಾಲ್ಗೊಳ್ಳುವಿಕೆ" ವಿನೂತನ ಕಾರ್ಯಕ್ರಮ

Webdunia
ಮಂಗಳವಾರ, 24 ಆಗಸ್ಟ್ 2021 (20:52 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯ ಪಾಲಿಕೆಯ ಜವಾಬ್ದಾರಿ, ವಲಯ ಕಛೇರಿಗಳ ಮೂಲಕ ನಿರ್ವಹಿಸಲಾಗುತ್ತಿದೆ. ಘನತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ, ಸಂಗ್ರಹಣೆ, ಸಾಗಣೆ ಮತ್ತು ಸಂಸ್ಕರಿಸಿ ವಿಲೇವಾರಿ ಮಾಡಲು ಕೇಂದ್ರ ಸರ್ಕಾರವು ಸಹ ಘನತ್ಯಾಜ್ಯ ನಿರ್ವಹಣೀಯಮಗಳು -2016 ಗಳನ್ನು ಜಾರಿಗೆ ತಂದಿದೆ.
 
ಅದರಂತೆ ನಗರದ ಶುಚಿತ್ವವನ್ನು ಕಾಪಾಡುವುದು ಪ್ರಾಥಮಿಕವಾಗಿ ಪಾಲಿಕೆಯ ಜವಾಬ್ದಾರಿಯಾದರೂ, ಸದರಿ ಕಾರ್ಯದಲ್ಲಿ ಸಮಾಜದ ನಾಗರೀಕರ ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿದೆ, ನಾಗರೀಕರದ್ದು ಸಮನಾಂತರದ ಜವಾಬ್ದಾರಿಯಾಗಿದೆ. ಸಮಾಜದ ನಾಗರೀಕರ ಮನಸ್ಥಿತಿ ಬದಲಾವಣೆಯು ಬಹುಮುಖ್ಯ ಅಂಶವಾಗಿದೆ, ನಗರದ ಶುಚಿತ್ವದ ಕಡೆಗೆ ವಾಲಿಸಲು ಯೋಜಿಸಲಾಗಿದೆ, ಪಾಲಿಕೆಯ ನಗರದ ಸಮಾನ ಮನಸ್ಕರ ಬಳಕೆಯ ಸ್ವಯಂ ಸೇವಕರ ಜೊತೆಗೂಡಿ ಘನತ್ಯಾಜ್ಯ ನಿರ್ವಹಣಾ ನಿಯಮಗಳು -2016 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಗರವನ್ನು ಬಳಸುತ್ತಿದೆ "ನಗರದ ಶುಚಿತ್ವಕ್ಕಾಗಿ ನಾಗರೀಕರ ಪಾಲ್ಗೊಳ್ಳುವಿಕೆ" ವಿನೂತನ ಕಾರ್ಯಕ್ರಮವನ್ನು ರೂಪಿಸಲಾಗಿದೆ. 
 
ಸದರಿ ಕಾರ್ಯಕ್ರಮ, ಎಲೆ ಲೇನ್ ಮಟ್ಟದ ಸ್ವಯಂ ಸೇವಕರು, ಬ್ಲಾಕ್ ಮಟ್ಟದಲ್ಲಿ ಶುಚಿ ಮಿತ್ರರು, ವಾರ್ಡ್/ವಿಭಾಗೀಯ ಮಟ್ಟದ ಸಂಯೋಜಕರು, ವಲಯ ಮಟ್ಟದ ಅಪೆಕ್ಸ್ ಸಂಯೋಜಕರು ಎಂಬ ಪದನಾಮದೊಂದಿಗೆ ಶುಚಿ ಮಿತ್ರರನ್ನು ನಿಯೋಜಿಸಿದ ನಂತರ, ಪಾಲಿಕೆಯ ಅಧಿಕಾರಿ ಸಮನ್ವಯ ಮಾಹಿತಿಯನ್ನು ಸಾಧಿಸಿ, ತಮ್ಮ ತಮ್ಮ ಲೇನ್/ಬ್ಲಾಕ್/ವಾರ್ಡ್/ವಿಭಾಗ/ವಲಯದ ಲಿಂಕ್ ಕಾರ್ಯಕರ್ತರನ್ನು ಮನೆ ಮನೆಗೆ ತೆರಳಿ ಜಾಗೃತಿಯನ್ನು ಮೂಡಿಸುವುದು, ಸಾಮೂಹಿಕ ಪ್ರಚಾರವನ್ನು ಕೈಗೊಳ್ಳುವುದು, ವಾರ್ಡ್ ಸಮಿತಿ ಸಭೆಯಲ್ಲಿ ಚರ್ಚಿಸಿ ತಂತ್ರಜ್ಞರ ಸಹಾಯದಿಂದ ಪರಿಹಾರಗಳನ್ನು ನೀಡುವುದು ಇತ್ಯಾದಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. 
 
ಈ ವಿನೂತನ "ನಗರದ ಶುಚಿತ್ವಕ್ಕಾಗಿ ನಾಗರೀಕರ ಪಾಲ್ಗೊಳ್ಳುವಿಕೆ" ಕಾರ್ಯಕ್ರಮದ ದಿನಾಂಕ: 25.08.2021 ರಂದು ಬೆಳಿಗ್ಗೆ 11.00 ಘಂಟೆಗೆ ನಗರದ ಟೌನ್ ಹಾಲ್ ಸ್ಥಳ "ನಮ್ಮ ನಡೆ, ಅದರ ಪಕ್ಕದ ಕಡೆ" ಎಂಬ ಗುರಿಯೊಂದಿಗೆ ಮತ್ತು "ನಮ್ಮ ಕಸ, ನಮ್ಮ ಜವಾಬ್ದಾರಿ" ಎಂಬ ಧೈಯ ವಾಕ್ಯದೊಂದಿಗೆ, ಪ್ರಾರಂಭಿಸಿ ಅನುಷ್ಠಾನವನ್ನು ಒದಗಿಸಲಾಗಿದೆ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಂದು ನಾವು ನೀಡಿದ ಅನುದಾನದಲ್ಲಿ ಕಾಮಗಾರಿ ಮಾಡ್ತಿದ್ರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ: ಆರ್‌ ಅಶೋಕ್‌

IMD, ಕೇರಳಕ್ಕೆ ನಾಲ್ಕೈದು ದಿನಗಳಲ್ಲಿ ಮುಂಗಾರು ಪ್ರವೇಶ

HD Kumaraswamy, ಸತ್ತ ಸರಕಾರಕ್ಕೆ ಸಾಧನೆ ಸಮಾವೇಶ ಬೇರೆ ಕೇಡು: ಕುಮಾರಸ್ವಾಮಿ ಗರಂ

Siddaramaiah: ನಾವು ನುಡಿದಂತೆ ನಡೆದಿದ್ದೇವೆ, ನಮಗೆ ಎಲ್ಲಾ ಧರ್ಮವೂ ಒಂದೇ: ಸಿಎಂ ಸಿದ್ದರಾಮಯ್ಯ

Rahul Gandhi: ನಿಮ್ಮ ಹಣವನ್ನು ನಿಮಗೇ ಮರಳಿಸುವುದೇ ನಮ್ಮ ಉದ್ದೇಶ: ರಾಹುಲ್ ಗಾಂಧಿ

ಮುಂದಿನ ಸುದ್ದಿ
Show comments