Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಾಮರಾಜಪೇಟೆ ಈದ್ಧಾ ಮೈದಾನ ವಿವಾದಕ್ಕೀಡಾಗಿರುವ ಹಿನ್ನೆಲೆ ಮೈದಾನದಲ್ಲಿ ಕುರಿ ಮೇಕೆ ಮಾರಾಟ ಮಾಡಿದ್ದಕ್ಕೆ ಕೆಲ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದು, ಇದಕ್ಕೂ ಬಿಬಿಎಂಪಿಗೂ ಸಂಬಂಧ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ನುಣಿಚಿಕೊಂಡರು. ಕುರಿ, ಮೇಕೆ ಮಾರಾಟದಿಂದ ಆಗಿರುವ ತ್ಯಾಜ್ಯವನ್ನು ಬಿಬಿಎಂಪಿ ಕ್ಲೀನ್ ಮಾಡೋದಿಲ್ಲ. ವಿವಾದ ಕೋರ್ಟ್ನಲ್ಲಿ ಇರುವುದರಿಂದ ನಾವು ಮೈದಾನದ ವಿಚಾರಕ್ಕೆ ಈಗ ಎಂಟ್ರಿಯಾಗಲ್ಲ,ಈದ್ದಾ ಮೈದಾನ ಸಂಬಂಧ ಹಲವು ಬಾರಿ ಚರ್ಚೆ ನಡೆದಿದೆ. ನಾವು ಯಾರಿಗೂ ನೋಟಿಸ್ ನೀಡುತ್ತಿಲ್ಲ. ಚಾಮರಾಪೇಟೆ ಮೈದಾನದ ವಿಚಾರ ಬಗ್ಗೆ ಜೆಸಿ ಗಮನಹರಿಸುತ್ತಾರೆ. ಬಕ್ರೀದ್ ವೇಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇದೆ, ನಮಾಜ್ ಮಾಡಲು ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ. ಹಾಗಾಗಿ ಪ್ರಾರ್ಥನೆ ಮಾಡಲು ಯಾವುದೇ ಅಡ್ಡಿ ಇಲ್ಲ. ಎಂದು ಹೇಳಿದರು.