Webdunia - Bharat's app for daily news and videos

Install App

ಬೀದಿ ನಾಯಿ ಮೇಲೆ ಕಾರು ಹರಿಸಿ ಕೊಂದ ಚಾಲಕ: ಬೆಂಗಳೂರಿನಲ್ಲಿ ಅಮಾನವೀಯ ಘಟನೆ!

Webdunia
ಶುಕ್ರವಾರ, 22 ಏಪ್ರಿಲ್ 2022 (16:17 IST)
ಕಾರು ಚಾಲಕನ ನಿರ್ಲಕ್ಷ್ಯವೋ..? ಉದ್ದಟತನವೋ..? ಆ ಜೀವ ನಡು ರಸ್ತೆಯಲ್ಲೇ ಒದ್ದಾಡಿ ಉಸಿರು ಚೆಲ್ಲಿದೆ. ಹೌದು, ಬೆಂಗಳೂರಿ ಜ್ಞಾನಭಾರತಿಯಲ್ಲಿ ಕಾರು ಹತ್ತಿಸಿದ್ದರಿಂದ ರಸ್ತೆ ದಾಟುತ್ತಿದ್ದ ಬೀದಿ ನಾಯಿ ಸಾವಿಗೀಡಾದ ಅಮಾನವೀಯ ಘಟನೆ ನಡೆದಿದೆ.
ಏಪ್ರಿಲ್ 19, ಬೆಳಗ್ಗೆ 9 ಗಂಟೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಸರ್ ಎಂವಿ ಲೇಔಟ್ ನ ಮೊದಲ ಬ್ಲಾಕ್ ನಲ್ಲಿ ಬೀದಿ ನಾಯಿ ಮೇಲೆ ಕಾರು ಚಾಲಕನೊಬ್ಬ ಕಾರು ಹರಿಸಿ ಪರಾರಿಯಾಗಿದ್ದಾನೆ.
ಕಾರು ಮೈಮೇಲೆ ಹರಿದಿದ್ದರಿಂದ ಮೂಕಪ್ರಾಣಿ ನೋವಿನೊಂದಿಗೆ ವಿಲವಿಲ ಒದ್ದಾಡಿ ಪ್ರಾಣ ಚೆಲ್ಲಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ಭೀಕರ ಘಟನೆ ಮನಕಲಕುವಂತಿದೆ. ಹೌದು, ಆ ಕಾರು ಚಾಲಕ ಒಂದು ಕ್ಷಣ ಕಾರು ನಿಲ್ಲಿಸಿ ಬಿಟ್ಟಿದ್ದರೆ ಆ ಜೀವ ಬದುಕುಳಿಯುತ್ತಿತ್ತು. ಆದರೆ ಕಾರು ಚಾಲಕನ ಅಸಡ್ಡೆಗೆ ಬೀದಿ ನಾಯಿ ಬಲಿಯಾಗಿದೆ.
ಈ ಘಟನೆ ನಡೆಯುವ ವೇಳೆ ಯಶು ಎಂಬ ಯುವಕ ಅಲ್ಲೇ ಪಕ್ಕದಲ್ಲಿದ್ದ. ಕಾರಿನ ಗಾಲಿಗೆ ಸಿಲುಕಿ ಒದ್ದಾಡುತ್ತಿದ್ದ ನಾಯಿಗೆ ತಕ್ಷಣವೇ ನೀರು ಕುಡಿಸಿ, ಬದುಕಿಸುವ ಪ್ರಯತ್ನ ಮಾಡಿದ್ದರೂ ಕೂಡ ಜೀವ ಉಳಿಯಲಿಲ್ಲ. ಅಲ್ಲೇ ಪಕ್ಕದಲ್ಲಿ ಜನರಲ್ ಸ್ಟೋರ್ ಇಟ್ಟುಕೊಂಡಿರುವ ಯಶ್ ಅಂಗಡಿಗೆ ಪ್ರತಿ ದಿನ ಈ ನಾಯಿ ಹೋಗುತ್ತಿತ್ತು. ಇದನ್ನು ನೆನೆಸಿಕೊಂಡು ಸಂಕಟಪಟ್ಟ ಯಶು, ಪ್ರತಿ ದಿನ ಈ ನಾಯಿಗೆ ಊಟ ಕೊಡುತ್ತಿದ್ದೆವು. ಕಾರು ಚಾಲಕ ಮನಸ್ಸು ಮಾಡಿದ್ದರೆ ನಾಯಿ ಬದುಕುಳಿಯುತ್ತಿತ್ತು ಎಂದಿದ್ದಾನೆ.
ಘಟನೆ ನಡೆದ ದಿನ ಸಂಜೆ ರಾಮಚಂದ್ರ ಭಟ್ಟ ಎಂಬವರಿಗೆ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದುಕೊಂಡು ಸಿಸಿಟಿವಿ ರಿಕವರಿ ಮಾಡಿಕೊಂಡಿದ್ದಾರೆ. ಸಿಸಿಟಿವಿ ಆಧರಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲು ಮುಂದಾಗಿದ್ದಾರೆ. ಆರಂಭದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಂತೆ. ಬಳಿಕ ಪ್ರಾಣಿ ಸಂಘದ ಸಹಾಯದಿಂದ ದೂರು ದಾಖಲಿಸಿ FIR ದಾಖಲಿಸಿದ್ದಾರೆ. ಅಲ್ಲದೆ ಕಾರು ಸೀಜ್ ಮಾಡುವುದಲ್ಲದೆ, ಕಾರು ಚಾಲಕನ ಲೈಸೆನ್ಸ್ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ.
ಈ ಹಿಂದೆಯೂ ರಾಜಧಾನಿ ಬೆಂಗಳೂರಿನಲ್ಲಿ ಇಂಥಾ ಹಲವು ಘಟನೆಗಳು ನಡೆದಿವೆ. ಬೀದಿ ನಾಯಿಗಳ ಮೇಲೆ ಏಕಾಏಕಿ ಕಾರು ಚಲಾಯಿಸಿ ಕೊಂದವರಿದ್ದಾರೆ. ಈಗ ಅದು ಮುಂದುವರೆದಿದೆ. ಇಲ್ಲಿ ನಮ್ಮಂಥೆ ಮೂಕಪ್ರಾಣಿಗಳೂ ಬದುಕುವ ಹಕ್ಕಿದೆ‌. ಅದನ್ನು ಕಾರು ಚಾಲಕರು ಗಮನದಲ್ಲಿಟ್ಟುಕೊಂಡು ಕಾರು ಚಲಾಯಿಸಿದರೆ ಬಡ ಜೀವಗಳು ಬಾಳಿ ಬದುಕುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ, ಯಾವ ಜಿಲ್ಲೆಗೆ ಏನು ಅಲರ್ಟ್ ಇಲ್ಲಿದೆ ವಿವರ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಮುಂದಿನ ಸುದ್ದಿ
Show comments