ಜಾತಿಗಣತಿಗೆ 425 ಕೋಟಿ ರೂ ಖರ್ಚು, ಉಪಯೋಗವಾದ್ರೆ ಸಾಕು: ಬಿವೈ ವಿಜಯೇಂದ್ರ

Krishnaveni K
ಶನಿವಾರ, 13 ಸೆಪ್ಟಂಬರ್ 2025 (15:46 IST)
ಬೆಂಗಳೂರು: ಕರ್ನಾಟಕ ಸರ್ಕಾರ ಜಾತಿಗಣತಿ ಮಾಡಲು ಮುಂದಾಗಿದ್ದು ಇದಕ್ಕೆ 425 ಕೋಟಿ ರೂ ಖರ್ಚು ಮಾಡಲಿದೆ. ಈ ವರದಿಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ  ವಿಜಯೇಂದ್ರ ಪ್ರತಿಕ್ರಿಯಿಸಿದ್ದು ಈ ಹಣ ಹಿಂದನಂತೆ ದುರುಪಯೋಗದೇ ಉಪಯೋಗವಾದರೆ ಸಾಕು ಎಂದಿದ್ದಾರೆ.

10 ವರ್ಷಗಳ ಹಿಂದೆ ಜಾತಿಗಣತಿಯಾಗಿದ್ದಾಗ 165 ಕೋಟಿ ರೂ. ಖರ್ಚಾಗಿತ್ತು. ಅದು ಬೇಡವೆಂದು ಹೈಕಮಾಂಡ್ ಹೇಳಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಈಗ ಹೊಸದಾಗಿ ಜಾತಿಗಣತಿ ಮಾಡಲು ಮುಂದಾಗಿದೆ. ಇದಕ್ಕೆ 425 ಕೋಟಿ ರೂ ಖರ್ಚಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿವೈ ವಿಜಯೇಂದ್ರ ‘ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ₹165 ಕೋಟಿ ವ್ಯಯಿಸಿ ಕಾಂತರಾಜು ಆಯೋಗ ನಡೆಸಿದ್ದ ಜಾತಿ ಗಣತಿಯನ್ನು 10 ವರ್ಷಗಳ ಹಳೆಯದು ಎಂಬ ಕಾರಣ ನೀಡಿ ಕಸದ ಬುಟ್ಟಿಗೆ ಹಾಕಿದೆ. ಇದೀಗ ಮತ್ತೆ ₹425 ಕೋಟಿ ರೂ ವ್ಯಯಿಸಿ ಜಾತಿ ಗಣತಿ ನಡೆಸಲು ಮುಂದಾಗಿದೆ. ಮುಖ್ಯಮಂತ್ರಿಗಳೇ, ಕಾಂತರಾಜು ಆಯೋಗದ ವರದಿಯಂತೆ ಇದೂ ಕೂಡ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಳ್ಳುವ ಸಾಧನವಾಗದಿರಲಿ.

ಅತ್ಯಲ್ಪ ಅವಧಿಯಲ್ಲಿ 7 ಕೋಟಿ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ತಯಾರಿಸುವುದಾಗಿ ಹೇಳಿದ್ದೀರಿ ಆದರೆ ಕೇವಲ ಪರಿಶಿಷ್ಟರ ಜಾತಿಗಣತಿ ನಡೆಸಲು ನಾಗಮೋಹನ್ ದಾಸ್ ಆಯೋಗವು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಪಡೆದಿತ್ತು, ಈಗ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ತಾಂತ್ರಿಕತೆ ಬಳಸಿಯಾದರೂ ಹೇಗೆ ಸಾಧ್ಯ? ಎಂಬ ಪ್ರಶ್ನೆ ಜನರಲ್ಲಿ ಮೂಡಿರುವುದು ಸಹಜವೆ.

ಕಾಂತರಾಜು ಆಯೋಗಕ್ಕೆ ವ್ಯಯಿಸಿದ್ದ ₹165 ಕೋಟಿ ರೂ ನಂತೆ ಈಗಿನ ₹425 ಕೋಟಿ ರೂ. ಹಣ ನೀರಿಗೆ ಹೋಮವಾಗದಿರಲಿ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಕ್ಷ ಲಕ್ಷ ಫೀಸ್ ಕೀಳ್ತಾರೆ.. ನೀಟ್ ಕೋಚಿಂಗ್ ಸೆಂಟರ್ ಗಳ ಶುಲ್ಕ ದಂಧೆ ಬಗ್ಗೆ ಕೊನೆಗೂ ಸಂಸತ್ ನಲ್ಲಿ ಚರ್ಚೆ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ತಮಿಳುನಾಡಿಗೆ ಕಾವೇರಿ ನೀರು: ಶುಕ್ರವಾರ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ

ಅಯ್ಯೋ ಹೀಗೂ ಆಗುತ್ತಾ.. ಹೋಟೆಲ್ ನಲ್ಲಿ ಮೊಟ್ಟೆ ತಿಂದ ವ್ಯಕ್ತಿಯ ಕತೆ ಏನಾಯ್ತು ನೋಡಿ Video

ಗೋಮೂತ್ರವೆಂದು ತಮಾಷೆ ಮಾಡಿದ್ದ ಪ್ರಿಯಾಂಕ ಗಾಂಧಿ: ನೀವೂ ಸ್ವಲ್ಪ ಬಳಸಿ ಶುದ್ಧರಾಗ್ತೀರಿ ಎಂದ ಅನುರಾಗ್ ಠಾಕೂರ್ Video

ಮುಂದಿನ ಸುದ್ದಿ
Show comments