Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಯಚೂರು : ಇಡೀ ದೇಶದಲ್ಲಿ ಬಸವರಾಜ ಬೊಮ್ಮಾಯಿ ಅಧಿಕಾರವಿಲ್ಲದ ಮುಖ್ಯಮಂತ್ರಿ, ಕೇಶವಕೃಪದ ಅಣತೆಯಂತೆ ಅಧಿಕಾರ ಚಲಾವಣೆ ನಡೆಯುತ್ತಿದೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ಗೆ ಯಾರೂ ಹೈಕಮಾಂಡ್ ಇಲ್ಲ, ಜನರೇ ನಮಗೆ ಹೈಕಮಾಂಡ್ ಎಂದರು. ತೆಲಂಗಾಣದಲ್ಲಿ ಚಂದ್ರಶೇಖರ್ ನಾಲ್ಕು ವರ್ಷದಲ್ಲಿ ನೀರಾವರಿ ಮುಗಿಸಿದ್ರು.
26 ಜನ ಎಂಪಿಗಳು ಕೂಳಿಗೆ ಭಾರವಾಗಿದ್ದಾರೆ. ಮೋದಿ ಮತ್ತು ಅಮಿತ್ ಶಾ ವಿರುದ್ಧ ಮಾತನಾಡುವ ನೈತಿಕತೆ ನಮ್ಮ ಎಂಪಿಗಳಿಗೆ ಇಲ್ಲ ಅಂತ ಲೇವಡಿ ಮಾಡಿದರು ಎಂದು ಹೇಳಿದರು.