Select Your Language

Notifications

webdunia
webdunia
webdunia
webdunia

ಸಚಿವ ರಮೇಶ್ ಹೈಕಮಾಂಡ್ ನಂತೆ ವರ್ತಿಸುವುದು ಬೇಡ ಎಂದ ಬಿಜೆಪಿ ಶಾಸಕ

ಬೆಂಗಳೂರು
ಬೆಂಗಳೂರು : ಸಚಿವ ರಮೇಶ್ ಹೈಕಮಾಂಡ್ ನಂತೆ ವರ್ತಿಸುವುದು ಬೇಡ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಸಿಪಿ ಯೋಗೇಶ್ವರ್ ಪರ ಸಚಿವ ರಮೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ  9ಕೋಟಿ ಸಾಲ ಮಾಡಿದ್ದಾರೆ. ಮನೆ ಮಾರಿದ್ದಾರೆ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಬಿಜೆಪಿ ವಕ್ತಾರಾ, ಇಲ್ಲಾ ಸಿಎಂ? ಎಂದು ಕಿಡಿಕಾರಿದ್ದಾರೆ.

ಯೋಗೇಶ್ವರ್ ಭ್ರಷ್ಟಾಚಾರ ಮಾಡಿ ಆಸ್ತಿ ಸಂಪಾದಿಸಿದ್ದಾರೆ. ಬಿಡದಿಯಲ್ಲಿ 50ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ. ಯೋಗೇಶ್ವರ್ 4 ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಅವರು ಹೊಸ ಬಂಗಲೆಯನ್ನು ಕೂಡ ಖರೀದಿ ಮಾಡಿದ್ದಾರೆ. ಇದರ ನಡುವೆ ಅವರೇಕೆ 9 ಕೋಟಿ ಸಾಲ ಮಾಡಿದ್ರು? ಯೋಗೇಶ್ವರ್  ರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿಲ್ಲ. ಬೇರೆ ಪಕ್ಷದವರು ಇವರ ಮುಖ ನೋಡಿ ಬಂದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಯೋಗೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ ವೈ ಅವರ ಕುಟುಂಬ ರಾಜಕಾರಣದ ಬಗ್ಗೆ ಜ್ಞಾನೋದಯ-ಸಿದ್ದರಾಮಯ್ಯ ವ್ಯಂಗ್ಯ