Publish Date: Tue, 07 Mar 2023 (18:27 IST)
Updated Date: Tue, 07 Mar 2023 (18:30 IST)
ಬಹಳ ಅರ್ಜೆಂಟಾಗಿ ಎಲೆಕ್ಷನ್ ಮಾಡೋದಕ್ಕೆ ಬಿಜೆಪಿಯವ್ರು ಹೊರಟಿದ್ದಾರೆ. 28 ಲಾಸ್ಟ್ ವರ್ಕಿಂಗ್ ಡೇ ಅಂತಾ ಪೊಲೀಸರು ಅಧಿಕಾರಿಗಳಿಗೆ ಹೇಳಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟು ದಿನ ಸಿಗುತ್ತೋ ಅಷ್ಟು ದಿನ ನಮಗೆ ಲಾಭ. ಪ್ರತೀ ದಿನ ಶಾರ್ಟ್ ಟೆಂಡರ್ಗಳು ಆಗ್ತಾ ಇವೆ. ತರಾತುರಿಯಲ್ಲಿ ಹಣ ಬಿಡುಗಡೆ ಮಾಡುವುದು ಸರ್ಕಾರದಲ್ಲಿ ನಡೀತಾ ಇದೆ. ನಮ್ಮ ಬದ್ಧತೆ, ನಮ್ಮ ಸ್ಟ್ಯಾಂಡ್ ಏನು ಅಂತಾ ಸರ್ಕಾರಕ್ಕೆ ತಿಳಿಸ್ತೇವೆ. ಬಿಜೆಪಿಗೆ ದಿನಾ ಜನ ಶಾಕಿಂಗ್ ನ್ಯೂಸ್ ಕೊಡ್ತಾ ಇದ್ದಾರೆ. ರಾಷ್ಟ್ರೀಯ ನಾಯಕರು ಮತಬೇಟೆಗೆ ಮಾತ್ರ ಬರ್ತಾ ಇದ್ದಾರೆ. ನೆರೆ ಇದ್ದಾಗ ಬರಲಿಲ್ಲ, ಮಾನವೀಯತೆ ಕಾಣಲಿಲ್ಲ ಎಂದು ಟೀಕಿಸಿದರು.