Webdunia - Bharat's app for daily news and videos

Install App

ಮನೆ ಬ್ರೋಕರ್ ಗಳಿಗೆ ಪತ್ರ ಕೊಡುವ ಮುನ್ನ ಎಚ್ಚರ ...!!!

Webdunia
ಶನಿವಾರ, 24 ಸೆಪ್ಟಂಬರ್ 2022 (17:01 IST)
ನಿಮ್ಮ ಪ್ರಾಪರ್ಟಿಯನ್ನ ಮಾರಾಟ ಮಾಡಿ ವಂಚನೆ ಮಾಡುವ ಗ್ಯಾಂಗ್ ಒಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಹೆಚ್​ಎಸ್​ಆರ್ ಲೇಔಟ್ ನಲ್ಲಿ ಪ್ರಾಪರ್ಟಿ ಹೊಂದಿದ್ದ 76 ವರ್ಷದ ಕೃಷ್ಣಾರೆಡ್ಡಿ ಎಂಬುವವರು ವಂಚನೆಗೆ ಒಳಗಾಗಿದ್ದಾರೆ.
ಮಾಲೀಕನಾ ಹೆಸರು ವಂಚಕನ ಹೆಸರು ಒಂದೇ ಇದಿದ್ದರಿಂದ ವಂಚನೆ ಮಾಡೋದಕ್ಕೆ ಮತ್ತಷ್ಟು ಸುಲಭವಾಗಿದೆ. ಸದ್ಯ ಈಗ ವಂಚನೆಗೆ ಒಳಗಾದ ಕೃಷ್ಣಾರೆಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
 
ವಂಚನೆಗೆ ಒಳಗಾದ ಕೃಷ್ಣರೆಡ್ಡಿಗೆ ಪರಿಚಯವಾಗಿದ್ದ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ವಂಚಕ ಕೃಷ್ಣಾ ರೆಡ್ಡಿ ಎಂಬುವವನು ಪ್ರಾಪರ್ಟಿ ಮೇಲೆ ಲೋನ್ ತೆಗೆದುಕೊಳ್ಳುವ ಸಲುವಾಗಿ ಜೆರಾಕ್ಸ್ ದಾಖಲೆಗಳನ್ನ ನೀಡಿದ್ದ. ಆ ಎಲ್ಲಾ ದಾಖಲೆಗಳನ್ನ ಬ್ಯಾಂಕ್ ಎಂಪ್ಲಾಯ್ ಕೃಷ್ಣಾರೆಡ್ಡಿ ವಂಚಕ ನಾಗರಾಜ್ ಗೆ ನೀಡಿದ್ದ. ಬಳಿಕ ಆ ದಾಖಲೆಗಳನ್ನ ಒರಿಜಿನಲ್ ರೀತಿ ಮಾಡಿ ಆರೋಪಿ ನಾಗರಾಜ್ ಮಾರಾಟ ಮಾಡಿದ್ದಾನೆ. ಇಂಜಿನಿಯರ್ ದಿಲೀಪ್ ಕುಮಾರ್ ಎಂಬುವವರಿಗೆ ಕೃಷ್ಣಾ ರೆಡ್ಡಿಯವರ ಹೆಚ್​ಎಸ್​ಆರ್ ಲೇಔಟ್ ನ ಪ್ರಾಪರ್ಟಿ ಮಾರಿದ್ದಾನೆ.
 
ನಾಗರಾಜ್ ನೀಡಿದ್ದ ದಾಖಲೆಗಳೆಲ್ಲವೂ ಒರಿಜಿನಲ್ ಎಂದು ತಿಳಿದು ದಿಲೀಪ್ ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಬಳಿಕ ವಂಚನೆ ಬೆಳಕಿಗೆ ಬಂದಿದ್ದು, ಆಶೋಕ್ ನಗರ ಪೊಲೀಸ್ ಠಾಣೆಗೆ ಅಧಿಕಾರಿಗಳು ದೂರು ನೀಡಿದ್ರು. ಅಶೋಕ್ ನಗರ ಪೊಲೀಸರು 76 ವರ್ಷದ ವೃದ್ಧ ಕೃಷ್ಣಾ ರೆಡ್ಡಿಯನ್ನ ಪ್ರಕರಣ ಸಂಬಂಧ ಭೇಟಿ ಮಾಡಿದ್ರು. ಪೊಲೀಸರು ಮನೆಗೆ ಬಂದಾಗಲೇ ಕೃಷ್ಣರೆಡ್ಡಿ ವಂಚನೆಗೆ ಒಳಗಾಗಿರೋದು ಗೊತ್ತಾಗಿದೆ. ತಕ್ಷಣವೇ ಹೆಚ್​ಎಸ್​ಆರ್ ಪೊಲೀಸ್ ಠಾಣೆಗೆ ವೃದ್ಧ ಕೃಷ್ಣ ರೆಡ್ಡಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ಸಂಬಂಧ ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments