Webdunia - Bharat's app for daily news and videos

Install App

ಭಿಕ್ಷುಕ ತಂದಿಟ್ಟ ಬಾಕ್ಸ್ ನಿಂದ ಅವಾಂತರ

Krishnaveni K
ಬುಧವಾರ, 14 ಫೆಬ್ರವರಿ 2024 (10:45 IST)
Photo Courtesy: Twitter
ಬೆಂಗಳೂರು: ಭಿಕ್ಷಕನೊಬ್ಬ ಏನೂ ಅರಿಯದೇ ಮಾಡಿದ ತಪ್ಪಿನಿಂದ ಸ್ಥಳೀಯರಿಗೆ ಆತಂಕವಾಗಿದ್ದು, ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ಆಗಮಿಸುವ ಪರಿಸ್ಥಿತಿ ಬಂದಿದೆ.

ಇದು ನಡೆದಿರುವುದು ಬೆಂಗಳೂರಿನ ಮಿನರ್ವ ಸರ್ಕಲ್ ಬಳಿ. ಫೆಬ್ರವರಿ 12 ರಂದು ಈ ಘಟನೆ ನಡೆದಿದೆ. ಭಿಕ್ಷುಕನೊಬ್ಬ ಎಟಿಎಂ ಮಿಷನ್ ಬಳಿ ಕೆಲವು ಬಾಕ್ಸ್ ಇಟ್ಟು ಹೋಗಿದ್ದ. ಇದನ್ನು ನೋಡಿದ ಮಂದಿ ಇದೇನು ಎಂದು ಆತಂಕಗೊಂಡರು. ಎಟಿಎಂ ಹಣವನ್ನು ತುಂಬಿಡುವ ಬಾಕ್ಸ್ ಅದು. ಇದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್ ಗೆ ಅನುಮಾನವಾಗಿತ್ತು. ತಕ್ಷಣವೇ ಅವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು.

ಅಷ್ಟರಲ್ಲಿ ಘಟನೆ ಅಲ್ಲಿದ್ದ ಸ್ಥಳೀಯರಿಗೆಲ್ಲೇ ಗೊತ್ತಾಗಿತ್ತು. ಇದರಿಂದ ಕೋಲಾಹಲವೇ ಉಂಟಾಗಿತ್ತು. ಎಟಿಎಂ ಹಣ ಕಳ್ಳತನಕ್ಕೆ ಪ್ರಯತ್ನಿಸಿರಬಹುದು ಅಥವಾ ಬಾಂಬ್ ಇಟ್ಟಿರಬಹುದು ಎಂದು ಅಲ್ಲಿದ್ದವರು ತಲೆಗೊಂದರಂತೆ ಮಾತನಾಡಲು ಶುರು ಮಾಡಿದರು. ಪೊಲೀಸರೂ ರಿಸ್ಕ್ ಬೇಡವೆಂದು ಬಾಂಬ್ ನಿಷ್ಕ್ರಿಯ ದಳದವರನ್ನು ಕರೆದರು.

ಬಾಂಬ್ ನಿಷ್ಕ್ರಿಯ ದಳದವರು ಪರಿಶೀಲನೆ ಮಾಡಿದಾಗ ಬಾಕ್ಸ್ ಖಾಲಿ ಎಂದು ಗೊತ್ತಾಯಿತು. ನಿಜ ತಿಳಿದ ಮೇಲೆ ಜನರು ನಿಟ್ಟುಸಿರು ಬಿಟ್ಟರು. ಹಾಗಿದ್ದರೂ ಈ ರಾಶಿ ಬಾಕ್ಸ್ ಗಳು ಎಲ್ಲಿಂದ ಬಂತು ಎಂದು ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಈ ವೇಳೆ ಭಿಕ್ಷುಕನೊಬ್ಬ ತಂದಿಟ್ಟಿದ್ದು ಗೊತ್ತಾಗಿದೆ. ಇದೀಗ ಆ ಭಿಕ್ಷುಕನಿಗಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದೋ, ಗಂಭೀರತೆ ಅರಿಯದೇ ಭಿಕ್ಷಕು ಈ ರೀತಿ ಮಾಡಿದನೋ ಗೊತ್ತಾಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments