Webdunia - Bharat's app for daily news and videos

Install App

ಬ್ಯಾಟರಿ ಕಳ್ಳತನ ಮಾಡುತಿದ್ದ ದಂಪತಿ ಅಂದರ್

Webdunia
ಮಂಗಳವಾರ, 15 ಫೆಬ್ರವರಿ 2022 (15:04 IST)
ಟ್ರಾಫಿಕ್ ಸಿಗ್ನಲ್ ಗಳಲ್ಲಿ ಹಾಕಿದ್ದ ಬಲ್ಪ್ ಮತ್ತು ಬ್ಯಾಟರಿಗಳನ್ನು ಕದಿಯುತ್ತಿದ್ದ ಕಿಲಾಡಿ ದಂಪತಿಯನ್ನು ಬೆಂಗಳೂರಿನ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
 
ಬ್ಯಾಟರಿಗಳನ್ನ ಖರೀದಿ ಮಾಡುತ್ತಿದ್ದ ಧನಶೇಖರ್ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿದ್ದು, ಸುಮಾರು 90 ಲಕ್ಷ ರೂ.
ಮೌಲ್ಯದ 230 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
 
ಪ್ರತಿ ದಿನ ರಾತ್ರಿ 3ರಿಂದ 5 ಗಂಟೆ ಅವಧಿಯಲ್ಲಿ ದ್ವಿಚಕ್ರದಲ್ಲಿ ಬಂದು ಸಿಗ್ನಲ್ ಗಳಲ್ಲಿ ಲೈಟ್ ಮತ್ತು ಸಿಸಿಟಿವಿ ಕಾರ್ಯ ನಿರ್ವಹಿಸಲು ಹಾಕಲಾಗಿದ್ದ ಬ್ಯಾಟರಿಗಳನ್ನು ಈ ದಂಪತಿ ಕದಿಯುತ್ತಿದ್ದರು. ನಂಬರ್ ಪ್ಲೇಟ್ ಕಾಣದಿರಲು ವಾಹನದ ಬ್ರೇಕ್ ಲೈಟ್ ಕಟ್ ಮಾಡಿದ್ದರು.
 
ವಿಶೇಷ ತಂಡ ರಚನೆ ಮಾಡಿದ್ದ ಅಶೋಕನಗರ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ದಂಪತಿ ಗೊರಗುಂಟೆ ಪಾಳ್ಯದ ಕಡೆ ತೆರಳುವುದು ಗಮನಿಸಿ ತನಿಖೆ ನಡೆಸಿ ಬಂಧಿಸಿದ್ದಾರೆ.
 
ಮೋಜಿನ ಜೀವನ ಮಾಡುವ ಉದ್ದೇಶದಿಂದ ಸುಲಭವಾಗಿ ಹಣ ಸಂಪಾದನೆ ಮಾಡಲು ಕಳ್ಳತನಕ್ಕಿಳಿದಿದ್ದ ದಂಪತಿ, ಬೆಂಗಳೂರಿನ ಅಶೋಕನಗರ, ವಿಲ್ಸನ್ ಗಾರ್ಡನ್, ವೈಯಾಲಿಕಾವಲ್, ರಾಜಾಜಿನಗರ, ಇಂದಿರಾನಗರ ಸೇರಿದಂತೆ ಹಲವು ಸಿಗ್ನಲ್ ಗಳಲ್ಲಿ ಕಳ್ಳತನ ಮಾಡಿದ್ದಾರೆ.
 
ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 68 ಪ್ರಕರಗಳು ಪತ್ತೆಯಾಗಿದ್ದು, ಬ್ಯಾಟರಿಗಳ ಅಂದಾಜು ಬೆಲೆ 20 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಕದ್ದ ಬ್ಯಾಟರಿಗಳನ್ನ ಗುಜರಿ ಅಂಗಡಿಗಳಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮನೆ ಹೊರಗೇ ಗಂಟೆಗಟ್ಟಲೆ ಕಾದು ನಿಂತಿದ್ದ ಅಮ್ಮ, ಮನೆ ಒಳಗಿದ್ದ ಮಗಳು ಪ್ರಿಯಕರನ ಜೊತೆ... Video

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ರೇಟ್ ಫಿಕ್ಸ್ ಆಗದೆ ಡೇಟ್ ಫಿಕ್ಸ್ ಆಗಲಿಲ್ಲ ಎಂಬ ಆರೋಪಕ್ಕೆ ಕಾಂಗ್ರೆಸ್ ನಾಯಕರೇ ಸಾಕ್ಷಿ: ವಿಜಯೇಂದ್ರ

ಪ್ರತಿಭಟನೆ ಏನೋ ಮಾಡ್ತೀರಾ, ರಾಷ್ಟ್ರಧ್ವಜ ಹೇಗೆ ಹಿಡಿಯಬೇಕು ಗೊತ್ತಿಲ್ವಾ: ಮೆಹಬೂಬಾ ಮುಫ್ತಿಗೆ ನೆಟ್ಟಿಗರ ತರಾಟೆ video

ಹತ್ತಲು ಹೋಗಿ ಬಿದ್ದ ಯುವಕನನ್ನು ಮಾರು ದೂರ ಎಳೆದುಕೊಂಡು ಹೋದ ರೈಲು: ಕೊನೆಗೆ ಏನಾಯ್ತು video

ಮುಂದಿನ ಸುದ್ದಿ
Show comments