Webdunia - Bharat's app for daily news and videos

Install App

ಬಾಯ್ ಫ್ರೆಂಡ್ ಜೊತೆ ಹೋಗುವ ಮುಂಚೆ ಎಚ್ಚರ: ಬೆಂಗಳೂರಿನಲ್ಲಿ ನಡೆಯುತ್ತಿದೆ ಗರ್ಲ್ ಫ್ರೆಂಡ್ ಎಕ್ಸ್ ಜೇಂಜ್ ದಂಧೆ

Krishnaveni K
ಶನಿವಾರ, 21 ಡಿಸೆಂಬರ್ 2024 (11:36 IST)
ಬೆಂಗಳೂರು: ಹೊಸ ವರ್ಷಕ್ಕೆ ಗೆಳೆಯನ ಜೊತೆ ಪಾರ್ಟಿ ಮಾಡಲು ಹೋಗಲು ಪ್ಲ್ಯಾನ್ ಹಾಕಿರುವ ಯುವತಿಯರು ಈ ಸ್ಟೋರಿ ತಪ್ಪದೇ ಓದಬೇಕು. ಬೆಂಗಳೂರಿನಲ್ಲಿ ಈಗ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ದಂಧೆಯೇ ಶುರುವಾಗಿದೆ ಎಂಬುದು ಬೆಳಕಿಗೆ ಬಂದಿದೆ.

ಹೊಸ ವರ್ಷಕ್ಕೆ ಇನ್ನೂ ಸರಿಯಾಗಿ ಗುರುತು ಪರಿಚಯವಿಲ್ಲದ ಯುವಕನನ್ನು ಬಾಯ್ ಫ್ರೆಂಡ್ ಎಂದು ನಂಬಿ ಪಾರ್ಟಿ ಮಾಡಲು ಹೋಗುವ ಮುನ್ನ ಯುವತಿಯರು ಎಚ್ಚರವಾಗಿರಬೇಕು. ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಬೆನ್ನಲ್ಲೇ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ದಂಧೆ ಬೆಳಕಿಗೆ ಬಂದಿದೆ.

ಕೆಲವು ವರ್ಷದ ಹಿಂದೆ ವೈಫ್ ಸ್ವಾಪಿಂಗ್ ಎಂಬ ದಂಧೆ ಬೆಳಕಿಗೆ ಬಂದಿತ್ತು. ಅಂದರೆ ತನ್ನ ಪತ್ನಿಯನ್ನು ಪರಪುರುಷನಿಗೆ ಒಪ್ಪಿಸುವುದು, ಪರಪುರುಷನ ಪತ್ನಿಯೊಂದಿಗೆ ತಾನು ಲಲ್ಲೆ ಹೊಡೆಯುವುದು. ಇದೇ ರೀತಿ ಈಗ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ದಂಧೆ ಶುರುವಾಗಿದೆ.

ಬೆಂಗಳೂರಿನ ಯುವತಿಯೊಬ್ಬಳು ಈ ಸಂಬಂಧ ಬಾಯ್ ಫ್ರೆಂಡ್ ನಿಂದ ಮೋಸ ಹೋಗಿರುವ ಬಗ್ಗೆ ದೂರು ನೀಡಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಸ್ನೇಹಿತನನ್ನು ನಂಬಿ ಪಾರ್ಟಿಗೆ ಹೋದಾಗ ಆತ ತನ್ನ ಸ್ನೇಹಿತನ ಜೊತೆ ಕೆಲವು ಸಮಯ ಸಹಕರಿಸಲು ಹೇಳಿದ್ದಾನೆ. ಯುವತಿ ಒಪ್ಪದೇ ಹೋದಾಗ ಸ್ನೇಹಿತರ ಜೊತೆ ಸೇರಿಕೊಂಡು ಅತ್ಯಾಚಾರವೆಸಗಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಹರೀಶ್ ಮತ್ತು ಹೇಮಂತ್ ಎಂಬ ಇಬ್ಬರನ್ನು ಬಂದಿಸಿದ್ದಾರೆ. ಈ ವೇಳೆ ಅವರ ಮೊಬೈಲ್ ನಲ್ಲಿ ಸ್ವಿಂಗರ್ಸ್ ಎಂಬ ಹೆಸರಿನಲ್ಲಿ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ವ್ಯಾಟ್ಸಪ್ ಗ್ರೂಪ್ ನ್ನೇ ತೆರೆದಿರುವುದು ಬೆಳಕಿಗೆ ಬಂದಿದೆ. ಯುವತಿಯರ ಸ್ನೇಹ ಸಂಪಾದಿಸುವುದು ಬಳಿಕ ತಮ್ಮ ಸ್ನೇಹಿತರ ಜೊತ ಸಹಕರಿಸಲು ಒತ್ತಾಯಿಸುವುದೇ ಇವರ ಪ್ಲ್ಯಾನ್ ಎಂಬುದು ಗೊತ್ತಾಗಿದೆ. ಹೀಗಾಗಿ ಬಾಯ್ ಫ್ರೆಂಡ್ ಎಂದು ಹಿಂದೆ ಮುಂದೆ ನೋಡದೇ ನಂಬುವ ಮೊದಲು ಯುವತಿಯರು ಎಚ್ಚರವಾಗಿರುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments