Webdunia - Bharat's app for daily news and videos

Install App

ಪೋಸ್ಟ್ ಆಫೀಸ್ ಗ್ರಾಹಕರಿಗೆ ಬ್ಯಾಡ್ ನ್ಯೂಸ್ ; IPPB ಖಾತೆಗಳ ಮೇಲಿನ ಬಡ್ಡಿದರ ಕಡಿತ..!

Webdunia
ಸೋಮವಾರ, 31 ಜನವರಿ 2022 (20:53 IST)
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ತನ್ನ ಗ್ರಾಹಕರಿಗೆ ಆಘಾತಕಾರಿ ಸುದ್ದಿಯನ್ನು ನೀಡಿದ್ದು, ತನ್ನ ಉಳಿತಾಯ ಖಾತೆಗಳ ( Saving account) ಮೇಲಿನ ಬಡ್ಡಿದರವನ್ನು ಇಳಿಸುತ್ತಿರುವುದಾಗಿ ಪ್ರಕಟಿಸಿದ್ದು, ಈ ಕಡಿಮೆಯಾದ ಬಡ್ಡಿದರಗಳು ನಾಳೆಯಿಂದ, ಅಂದರೆ ಫೆಬ್ರವರಿ 1, 2022 ರಿಂದ ಜಾರಿಗೆ ಬರುತ್ತಿವೆ.
ಭಾರತ ಅಂಚೆ ಪಾವತಿ ಬ್ಯಾಂಕ್ (IPPB) ಅನ್ನು ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆ ನಿರ್ವಹಿಸುತ್ತದೆ. IPPB ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಫೆಬ್ರವರಿ 1 ರಿಂದ 1 ಲಕ್ಷದವರೆಗಿನ ದರಗಳು ಕೇವಲ ಶೇಕಡಾ 2.25 ಬಡ್ಡಿ ಮಾತ್ರ ಸಿಗುತ್ತದೆ. ಇನ್ನು, 1 ಲಕ್ಷದಿಂದ 2 ಲಕ್ಷದವರೆಗಿನ ಮೊತ್ತದ ಬಡ್ಡಿ ದರವನ್ನು ಶೇಕಡಾ 2.50 ಕ್ಕೆ IPPB ನಿಗದಿಪಡಿಸಿದೆ.
ಈ ಹಿಂದೆ ಅಂಚೆ ಇಲಾಖೆಯು 1 ಲಕ್ಷದವರೆಗಿನ ಬ್ಯಾಲೆನ್ಸ್‌ಗೆ ಶೇ.2.50 ಮತ್ತು ರೂ.1 ಲಕ್ಷದಿಂದ ರೂ.2 ಲಕ್ಷದವರೆಗಿನ ಬ್ಯಾಲೆನ್ಸ್‌ಗಳಿಗೆ ಶೇ.2.75 ಬಡ್ಡಿದರ ನೀಡಿತ್ತು. ಈ ಬಡ್ಡಿದರಗಳು ಜುಲೈ 1, 2021 ರಿಂದಲೇ ಜಾರಿಯಲ್ಲಿತ್ತು. ಅಂದರೆ ಪೋಸ್ಟ್ ಇಂಡಿಯಾ ಪೇಮೆಂಟ್ಸ್ ಬ್ಯಾಂಕ್ ಈಗ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್‌ಗಳವರೆಗೆ ಕಡಿತಗೊಳಿಸಿದೆ. IPPB ಈ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಗ್ರಾಹಕರಿಗೆ ಪಾವತಿಸುತ್ತದೆ.
IPPB ಅಧಿಸೂಚನೆಯ ಪ್ರಕಾರ … ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಆಸ್ತಿ ಹೊಣೆಗಾರಿಕೆ (assets and liability) ಸಮಿತಿಯು ಅನುಮೋದಿಸಿದ ನೀತಿಯ ಪ್ರಕಾರ ಉಳಿತಾಯ ಖಾತೆಗಳ ಮೇಲಿನ ಎಲ್ಲಾ ಗ್ರಾಹಕರ ರೂಪಾಂತರಗಳ ಬಡ್ಡಿದರಗಳನ್ನು ಪರಿಶೀಲಿಸಿದ್ದು, ಈ ಬಡ್ಡಿ ದರಗಳು ಫೆಬ್ರವರಿ 1, 2022 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿದ್ಯುತ್ ಕಂಬಕ್ಕೆ ಸುತ್ತು ಹಾಕಿ ಹಕ್ಕಿಗಳನ್ನು ತಿನ್ನಲು ಹೋದ ಬೃಹತ್ ಹೆಬ್ಬಾವಿನ ಕತೆ ಏನಾಯ್ತು ನೋಡಿ Video

ಕಾಡಿನ ನಡುವೆ ರೈಲು ಪ್ರಯಾಣಿಸುವಾಗ ಡೋರ್ ತೆಗೆದು ಮಲಗಿದ್ದೇ ತಪ್ಪಾಯ್ತು: ಊಹಿಸಲೂ ಆಗದ ಘಟನೆಯ Video

ಎದುರು ಕಾಡಾನೆ ಎದುರಾದರೂ ಕಾರು ಮುನ್ನಗ್ಗಿಸಿದ ಮಹಿಳೆ: ಮುಂದೇನಾಯ್ತು ನೋಡಿ Video

ಒಂದೇ ಒಂದು ಮಾತಿನಿಂದ ಟಿಬಿ ಜಯಚಂದ್ರ ಮುನಿಸು ಮರೆಸಿದ ಸಿಎಂ ಡಿಕೆ ಶಿವಕುಮಾರ್

ಆಕಾಶದಲ್ಲಿ ವಿಮಾನ ಹಾರಾಡುತ್ತಿರುವಾಗಲೇ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕ: ಮುಂದೇನಾಯ್ತು Video

ಮುಂದಿನ ಸುದ್ದಿ
Show comments