Webdunia - Bharat's app for daily news and videos

Install App

ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಆದ್ರೆ ಆಟೋ ಗ್ಯಾಸ್ ಬೆಲೆ ಇಳಿಕೆಗೆ ನಿರ್ಲಕ್ಷ

Webdunia
ಸೋಮವಾರ, 6 ಜೂನ್ 2022 (18:58 IST)
ಪೆಟ್ರೋಲ್ ಡೀಸೆಲ್ ಬೆಲೆ ಏನೋ ಕಮ್ಮಿಯಾಯಿತು , ಇತ್ತ ಅಡುಗೆ ಗ್ಯಾಸ್ ದರವನ್ನು ಕೂಡಾ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ  ಆದ್ರೆ ಆಟೋ ಗ್ಯಾಸ್ ದರವನ್ನು ಯಾಕೆ ಇಳಿಕೆ ಮಾಡಿಲ್ಲ ಅಂತ ಆಟೋ ಡ್ರೈವರ್ಸ್ ಆಕ್ರೋಶಭರಿತರಾಗಿದ್ದಾರೆ.ಮೊನ್ನೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಾ ಕಡಿಮೆಗೊಳಿಸಿದ ಮೋದಿ ಅವರು ಜನರಿಗಾಗಿ ತೈಲಬೆಲೆಯಲ್ಲಿ ಇಳಿಕೆ ಮಾಡಲಾಗಿದೆ ಅಂತ ಹೇಳಿ ಟ್ವಿಟ್ ಮಾಡಿದ್ರು . ಆದ್ರೆ ಈಗ ಅದೇ ಜನ ಅಂದ್ರೆ ಆಟೋ ಡ್ರೈವರ್ ಗಳು ಮೋದಿಯವರನ್ನ ಪ್ರಶ್ನೆ ಮಾಡುತ್ತಿದ್ದಾರೆ .ನಾವೇನು ಜನರಲ್ವೆ ಆಟೋ ಗ್ಯಾಸ್ ದರವನ್ನು ಯಾಕೆ ಮಾಡಿಲ್ಲ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಕಳೆದ 3 ತಿಂಗಳು ಹಿಂದೆ ಆಟೋ ದರ ಏರಿಕೆಯಯ್ತು . ಇದರಿಂದ  ನಾಲ್ಕು ಕಾಸು ಹೆಚ್ಚು ಸಂಪಾದಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಆಟೋ ಗ್ಯಾಸ್ ದರ ಮಾತ್ರ ಜಾಸ್ತಿಯಾಗುತ್ತಲೇ ಇದೆ . ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 40 ರೂಪಾಯಿ ಜಾಸ್ತಿಯಾಗಿದೆ . ಇದರಿಂದ ಆಟೋ ಚಾಲಕರು ಆಟೋ ಗ್ಯಾಸ್ ಕೂಡ ಇಳಿಕೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ . 
ಕಳೆದ ಮೂರು ತಿಂಗಳಲ್ಲಿ ಆಟೋ ಗ್ಯಾಸ್ ದರ ಸುಮಾರು 27 ರೂ. ಏರಿಕೆಯಾಗಿದೆ. ಸದ್ಯ ರಾಜಧಾನಿಯಲ್ಲಿ ಇಂದು ಒಂದು ಲಿ. ಆಟೋ ಗ್ಯಾಸ್ ದರ 77.24 ಪೈಸೆ ಗೆ ತಲುಪಿದೆ .  ಸಹಜವಾಗೇ ಈ ದರ ಏರಿಕೆ ಆಟೋ ಚಾಲಕರ ಜೇಬಿಗೆ ತೂತು ಕೊರೆದಿದೆ ಮತ್ತು ದಿನದ ದುಡಿಮೆಯಲ್ಲಿ ನಾಲ್ಕು ಕಾಸು ಉಳಿಸುವ ಅವರ ನಿರೀಕ್ಷೆಯನ್ನು ಮಣ್ಣುಪಾಲು ಮಾಡಿದೆ. ಪ್ರಯಾಣ ದರ ಹೆಚ್ಚಳ ಪ್ರಯಾಣಿಕರಿಗೆ ಹೊರೆಯಾಗಿದ್ದರೆ,  ಗ್ಯಾಸ್‌ ದರ ಹೆಚ್ಚಳ ಮಾಡಿರುವುದು ಚಾಲಕರಿಗೆ ಹೊರೆಯಾಗಿದೆ. ಹೀಗಾಗಿ ಆಟೋ ಚಾಲಕರು ಪೆಟ್ರೋಲ್ ಡೀಸೆಲ್ ಬೆಲೆ ಯಂತೆ ಆಟೋ ಗ್ಯಾಸ್ ದರವನ್ನು ಇಳಿಕೆ ಮಾಡಬೇಕು ಅಂತ ಕೇಳಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವಾ ಕಾರಣಕ್ಕೆ ಈ ಸಂಭ್ರಮ: ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಪಾಕಿಸ್ತಾನ ಪರ ಬೇಹುಗಾರಿಗೆ: ಎನ್‌ಐಎಯಿಂದ ಯೂಟ್ಯೂಬರ್‌ ಜ್ಯೋತಿಗೆ ನಾನಾ ರೀತಿಯಲ್ಲಿ ಪ್ರಶ್ನೆ

ಕನ್ನಡ ಮಾತೇ ಆಡಲ್ಲ, ಹಿಂದಿ ರಾಷ್ಟ್ರ ಭಾಷೆ ಏನಿವಾಗ? SBI ಅಧಿಕಾರಿಯ ದರ್ಪ: video

Pahalgam Attack, ಅಂದು ಮೋದಿ ಎಚ್ಚರಿಕೆ ನೀಡುತ್ತಿದ್ದರೆ 26 ಮಂದಿಯ ಜೀವ ಉಳಿಯುತ್ತಿತ್ತು: ಮಲ್ಲಿಕಾರ್ಜುನ ಖರ್ಗೆ

ಅಂದು ನಾವು ನೀಡಿದ ಅನುದಾನದಲ್ಲಿ ಕಾಮಗಾರಿ ಮಾಡ್ತಿದ್ರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ: ಆರ್‌ ಅಶೋಕ್‌

ಮುಂದಿನ ಸುದ್ದಿ
Show comments