Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
PSI ಪರೀಕ್ಷೆ ಅಕ್ರಮ ಪ್ರಕರಣ ವಿರೋಧಿಸಿ KPSC ಆಯೋಗಕ್ಕೆ ಮುತ್ತಿಗೆ ಹಾಕಲು ಆಪ್ ಕಾರ್ಯಕರ್ತರು ಮುಂದಾದರು. ನಗರದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಲಾಯಿತು. KPSC ಆಯೋಗಕ್ಕೆ ಬೀಗ ಹಾಕಲು ಮುದಾದ ಆಪ್ ಪ್ರತಿಭಟನಾಕಾರರನ್ನ ಬಂಧಿಸಲಾಯಿತು. KPSC ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಪರೀಕ್ಷೆ ಬರೆದ ಉತ್ತರ ಪತ್ರಿಕೆಗಳ ಪ್ರತಿ ಕೊಡೋದಿಲ್ಲ..ಆರ್ ಟಿಐನಲ್ಲಿ ಕೇಳಿದ್ರೂ ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಉದ್ಯೋಗ ಸೌಧಕ್ಕೆ ಹೋಗಲು ಬಿಡಿ. ನಮ್ಮ ಹೋರಾಟವನ್ನ ಮುಂದುವರೆಸಲು ಬಿಡಿ ಎಂದು ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು.