Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದೇಶದಲ್ಲಿ ಮುಂದೆ ತೃತೀಯ ರಂಗ ರಚನೆ ವಿಚಾರವಾಗಿ ಕೋಲಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಒಂದು ರಂಗ ರಚನೆಯಾಗುತ್ತಿದೆ.ದಸರಾ ಹಬ್ಬದ ದಿನದಂದು ಭಾರತೀಯ ರಾಷ್ಟ್ರೀಯ ಸಮಿತಿ ಘೋಷಣೆ ಸಾಧ್ಯತೆ ಇದೆ.ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹೊಂದಾಣಿಕೆ ವಿಚಾರವಾಗಿಯೂ ಹೇಳಿದ್ದಾರೆ.ನಮ್ಮದು ಸಣ್ಣ ಪಕ್ಷ ನಮ್ಮನ್ನ ಯಾರ್ ಕೇಳ್ತಾರೆ.ನಮಗೆ ಕರ್ನಾಟಕದಲ್ಲಿ ಸಾಗುವಳಿ ಚೀಟಿ ಭೂಮಿಯಿದೆ.ನಾವು ಬಗರಹುಕುಂ ಜಾಗ ಹುಡಿಕ್ಕೊಂಡು ಹೋಗಲ್ಲ.ನಮ್ಮ ಭೂಮಿಯಲ್ಲೆ ಬಿತ್ತನೆ ಮಾಡಿ ಫಸಲು ತೆಗೀತೀವಿ ಎಂದು ಹೊಂದಾಣಿಕೆ ಕುರಿತು ವಿಭಿನ್ನವಾಗಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದಾರೆ.