Publish Date: Wed, 02 Aug 2023 (22:03 IST)
Updated Date: Wed, 02 Aug 2023 (21:06 IST)
ಅನಧಿಕೃತ ಸೀಟ್ ಗಳನ್ನು ತೆರವು ಗೊಳಿಸಲು ಹೋಗಿ ಪಾಲಿಕೆ ಎಡವಟ್ಟು ಮಾಡಿದೆ.ದೇವಸ್ಥಾನದ ಗೋಡೆಯನ್ನು ಬಿಬಿಎಂಪಿ ಕೆಡವಿದ್ದು,ಇದೀಗ ಕೆಡವಿದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಗಂಗಾಧರೇಶ್ವರ ದೇವಸ್ಥಾನದ ಗೋಡೆ ಕುಸಿತ ಸ್ಥಳಕ್ಕೆ ವಲಯ ಆಯುಕ್ತರರ ಭೇಟಿ ನೀಡಿದ್ದಾರೆ.ಧರ್ಮರಾಯಸ್ವಾಮಿ ದೇವಸ್ಥಾನ ಹತ್ತಿರ ಇರುವ ಗಂಗಾಧರೇಶ್ವ ದೇವಾಲಯದ ಸ್ಥಳಕ್ಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಾಗೂ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಭೇಟಿ ನೀಡ ಹಾನಿಯಾದ ಸ್ಥಳ ಪರಿಶೀಲಿಸಿದ್ದಾರೆ.ಅಲ್ಲದೇ ಆದಷ್ಟು ಬೇಗ ಹಾನಿಗೊಳಗಾಗಿರುವ ದೇವಸ್ಥಾನದ ಕಟ್ಟಡ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.