Publish Date: Thu, 31 Jan 2019 (21:24 IST)
Updated Date: Thu, 31 Jan 2019 (21:26 IST)
ತ್ರಿವಿಧ ದಾಸೋಹಿ, ನಡೆದಾಡುವ ದೇವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಪುಣ್ಯಸ್ಮರಣೆ ನಡೆಯಿತು.
ಚಿಕ್ಕಮಗಳೂರಿನ ಲಕ್ಷ್ಮಿಪುರದಲ್ಲಿ ಗ್ರಾಮಸ್ಥರೆಲ್ಲರೂ ಸೇರಿಕೊಂಡು ನಡೆದಾಡುವ ದೇವರ ಕಾರ್ಯವನ್ನು ಸ್ಮರಿಸಿದರು. ಅಗಲಿ ಹೋಗಿರುವ ಗುರುಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ತ್ರಿವಿಧ ದಾಸೋಹ ನೀಡುವುದರಿಂದ ನಾವು ಕಂಡ ನಡೆದಾಡುವ ದೇವರು ನಮ್ಮ ಜೊತೆಯಲ್ಲಿ ಉಳಿಸಿಕೊಳ್ಳುತ್ತೇವೆ ಎಂದು ಭಕ್ತರು ಹೇಳಿದರು.
ಸಾವಿರಾರು ಸಂಖ್ಯೆಯಲ್ಲಿ ಸಿದ್ಧಗಂಗಾ ಶ್ರೀ ಭಕ್ತರು ಪಾಲ್ಗೊಂಡು ಸ್ವಾಮೀಜಿಗಳ ಪಾದಕ್ಕೆ ಪುಷ್ಪಗಳನ್ನು ಅರ್ಪಿಸಿದರು. ದಾಸೋಹವನ್ನು ಸ್ವೀಕರಿಸಿ ಅವರ ಆಶೀರ್ವಾದಕ್ಕೆ ಪಾತ್ರರಾದರು.