Select Your Language

Notifications

webdunia
webdunia
webdunia
webdunia

ಹಸಿವಿನಿಂದ ಮೂಕಪ್ರಾಣಿಯ ರೋಧನೆ ರೋದನೆ

ತಿನ್ನಲು ಏನನ್ನಾದರೂ ಕೊಡುವಿರಾ?
ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಡಾನೆಗಳು ಆಹಾರ, ಆಸರೆ ಅರಸಿ ನಾಡಿಗೆ ಬರುತ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮನು ಎಂಬಾತ ಕಾಡಾನೆ ತುಳಿತಕ್ಕೆ ಬಲಿಯಾಗಿದ್ದ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದೇ ಗ್ರಾಮದ ಲೋಕೇಶ್​​ ಎನ್ನುವವರ ಮನೆ ಮುಂದೆ ಮತ್ತೆ ಕಾಡಾನೆ ಕಾಣಿಸಿಕೊಂಡಿದೆ. ಆಹಾರ ಕೊಡಿ ಎನ್ನುವಂತೆ ಮನೆಯ ಮುಂದೆಯೇ ಆನೆ ಸಂಚಾರ ನಡೆಸಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆಹಾರಕ್ಕಾಗಿ ಮನೆ ಹಿಂದೆ-ಮುಂದೆ ಓಡಾಟ ನಡೆಸಿದೆ. ಕಾಡಾನೆಗಳ ಭಯದಲ್ಲಿದ್ದ ಜನ ಆಹಾರ ನೀಡಲು ಹಿಂದೇಟು ಹಾಕಿದ್ದಾರೆ. ಕೆಲಹೊತ್ತು ಅಲ್ಲೆ ಅಡ್ಡಾಡಿದ ಆನೆ ನಂತರ ವಾಪಸ್​​​ ತೆರಳಿದೆ. ಆಹಾರಕ್ಕಾಗಿ ಆನೆ ಅಂಗಲಾಚುತ್ತಿರುವ ದೃಶ್ಯ ಕಂಡು ಅಯ್ಯೋ ಎನಿಸುತ್ತಿದೆ. ಕಾಡಿನೊಳಗೆ ಆಹಾರ ಸಿಗದೇ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ.  ಅರಣ್ಯಾಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಲಾಲು ಪ್ರಸಾದ್ಗೆ ಕಿಡ್ನಿ ನೀಡಲು ಮುಂದಾದ ಪುತ್ರಿ