Select Your Language

Notifications

webdunia
webdunia
webdunia
webdunia

ಬೇಕರಿ ನುಗ್ಗಿ ಬೇಕರಿ ಗಾಜು ಪುಡಿಗಟ್ಟಿದ ಪುಂಡರ ಗುಂಪು

ಬೇಕರಿ ನುಗ್ಗಿ ಬೇಕರಿ ಗಾಜು ಪುಡಿಗಟ್ಟಿದ ಪುಂಡರ ಗುಂಪು
bangalore , ಶನಿವಾರ, 19 ಆಗಸ್ಟ್ 2023 (17:24 IST)
ರಾಜಧಾನಿಯಲ್ಲಿ ಪುಂಡರ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರಿ ಹೋಗ್ತಿದೆ.ಹಾಡಹಾಗಲೇ ಪುಂಡರ ಗುಂಪೊಂದು ಬೇಕರಿಗೆ ನುಗ್ಗಿ ಶೋಕೇಸ್ ಧ್ವಂಸಗೊಳಿಸಿ ಪುಂಡಾಟತೋರಿರೋ ಘಟನೆ ಬ್ಯಾಡರಹಳ್ಳಿ ಠಾಣವ್ಯಾಪ್ತಿಯಲ್ಲಿ ನಡೆದಿದೆ. ಮೊನ್ನೆ ಬ್ಯಾಡರಹಳ್ಳಿ ಪೊಲೀಸ್ ಠಾಣವ್ಯಾಪ್ತಿಯ ತುಂಗಾನಗರದ ಮಂಜುನಾಥ ಬೇಕರಿಯಲ್ಲಿ ಘಟನೆ ನಡೆದಿದೆ.ಎರಡುಮೂರು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮುಖ ಗುರುತು ಪತ್ತೆಯಾಗಬಾರದಂತ ಮಾಸ್ಕ್ ಧರಿಸಿ ಬಂದಿದ್ದಾರೆ. ಅಷ್ಟೇ ಅಲ್ಲದೆ ಬೈಕ್ ನಂಬರ್ ಪ್ಲೇಟ್ ಕಾಣಬಾರದು ಅಂತ ನಂಬರ್ ಪ್ಲೇಟ್ ಗೆ ಸಗಣಿ ಬಳಿದಿದ್ರಂತೆ. ಬೈಕ್ ನಲ್ಲಿ ಬಂದವರು ಏಕಾಏಕಿ ಬೇಕರಿ ಬಾಗಿಲಿಗೆ ಬಂದು ದೊಣ್ಣೆ ಮತ್ತು ಕಲ್ಲಿನಿಂದ ಬೇಕರಿಯ ಶೋಕೇಸ್ ಗ್ಲಾಸ್ ಪುಡಿಗಟ್ಟಿದ್ದಾರೆ. ಪುಂಡರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ರು ಗಂಭೀರಸ್ವರೂಪವಲ್ಲದ ಪ್ರಕರಣ(ಎನ್ ಸಿಆರ್ )ದಾಖಲಿಸಿಕೊಂಡು ಆರೋಪಿಗಳ ಪತ್ತೆ ಮಾಡ್ತಿರೋದಾಗಿ ಮಾಹಿತಿ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಸಾರಿಗೆ ಸಂಘಟನೆಗಳಿಂದ ಬೆಂಗಳೂರು ಬಂದ್ !