Select Your Language

Notifications

webdunia
webdunia
webdunia
webdunia

ಪಾನಿಪೂರಿ ತಿನ್ನಲು ಹೋದ ಗೆಳೆಯರ ನಡುವೆ ಗಲಾಟೆ, ಒಂದೇ ಪಂಚ್‌ಗೆ ಸ್ನೇಹಿತ ಸಾವು

ಬೆಂಗಳೂರು ಕ್ರೈಂ ರೇಟ್

Sampriya

ಬೆಂಗಳೂರು , ಭಾನುವಾರ, 14 ಸೆಪ್ಟಂಬರ್ 2025 (12:11 IST)
ಬೆಂಗಳೂರು: ಪಾನಿಪೂರಿ ತಿನ್ನಲು ಹೋದ ವೇಳೆ ಗೆಳೆಯರ ನಡುವೆ ನಡೆದ ಜಗಳ, ವಿಕೋಪಕ್ಕೆ ತಿರುಗಿ ಒಬ್ಬನ ಸಾವಿನಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯ ಬಳಿಯ ಅರಕೆರೆಯಲ್ಲಿ ನಡೆದಿದೆ. 

ಯುವಕರ ನಡುವೆ ಗಲಾಟೆ ನಡೆದು ಒಂದೇ ಪಂಚ್‌ಗೆ ಯುವಕ ಪ್ರಾಣ ಕಳೆದುಕೊಂಡಿದ್ದಾರೆ. 

ಮೃತ ಯುವಕನನ್ನು ಬಿಹಾರ ಮೂಲದ ಭೀಮಕುಮಾರ್ (25) ಎಂದು ಗುರುತಿಸಲಾಗಿದೆ. 

ಸ್ನೇಹಿತರೊಂದಿಗೆ ಪಾನಿಪೂರಿ ತಿನ್ನಲು ಹೋದ ವೇಳೆ ಭೀಮಕುಮಾರ್ ಮತ್ತು ಸಲ್ಮಾನ್ ನಡುವೆ ಗಲಾಟೆ ಆಗಿತ್ತು. ಭೀಮಕುಮಾರ್‌ನ ಕತ್ತಿನ ಭಾಗಕ್ಕೆ ಸಲ್ಮಾನ್ ಬಲವಾಗಿ ಒಂದು ಪಂಚ್ ಕೊಟ್ಟಿದ್ದ. ಪರಿಣಾಮ ಭೀಮಕುಮಾರ್ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ.ಮೂವರು ಸಾವು

ಬಳಿಕ ಜೊತೆಗಿದ್ದ ಯುವಕರು, ಭೀಮಕುಮಾರ್‌ನನ್ನ ಮನೆಗೆ ಕರೆದುಕೊಂಡು ಹೋಗಿ ಹಾರೈಕೆ ಮಾಡಿದ್ದರು. ಆದರೆ ಮೂರು ದಿನದ ಬಳಿ ಮನೆಯಲ್ಲೇ ಆತ ಸಾವನ್ನಪ್ಪಿದ್ದಾನೆ. ಈ ಘಟನಾ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ: ಹಗ್ಗ ತುಂಡಾಗಿ ಬದುಕುಳಿದ ಮಹಿಳೆ