Publish Date: Wed, 08 Jan 2020 (09:40 IST)
Updated Date: Wed, 08 Jan 2020 (09:43 IST)
ನವದೆಹಲಿ: ಜೆಎನ್ ಯುನಲ್ಲಿ ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿಗಳು ನಡೆಸಿದ ಹಲ್ಲೆ ವಿರುದ್ಧ ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಬೆಂಬಲಿಸಿದ ಮಾತನಾಡಿದ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಗೆ ಕುಸ್ತಿಪಟು ಯೋಗೇಶ್ವರ್ ದತ್ ತಿರುಗೇಟು ನೀಡಿದ್ದಾರೆ.
ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಬೆಂಬಲಿಸಿ ಟ್ವೀಟ್ ಮಾಡಿರುವ ಸಂಜಯ್ ಮಂಜ್ರೇಕರ್ ‘ವೆಲ್ ಡನ್ ಮುಂಬೈ’ ಎಂದು ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕುಸ್ತಿಪಟು, ಬಿಜೆಪಿ ನಾಯಕ ಯೋಗೇಶ್ವರ್ ದತ್ ಫ್ರೀ ಕಾಶ್ಮೀರ್ ಎಂಬ ಫಲಕ ಹಿಡಿದು ವಿವಾದ ಸೃಷ್ಟಿಸಿರುವ ಯುವತಿಯ ಫೋಟೋ ಪ್ರಕಟಿಸಿ ‘ಆ ಪ್ರತಿಭಟನೆಯಲ್ಲಿ ಕಂಡುಬಂದ ನೈಜ ಚಿತ್ರವಿದು. ಇದರ ಬಗ್ಗೆ ಜನಕ್ಕೆ ಏನು ಹೇಳಲು ಬಯಸುತ್ತೀರಿ ಸಂಜಯ್ ಮಂಜ್ರೇಕರ್?’ ಎಂದು ಪ್ರಶ್ನಿಸಿದ್ದಾರೆ. ಫ್ರೀ ಕಾಶ್ಮೀರ್ ಎಂಬ ಫಲಕ ಹಿಡಿದಿದ್ದ ಯುವತಿಗಾಗಿ ಇದೀಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.