Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಕೊಟ್ಟ ಕಾಡುಮನುಷ್ಯರು ಹಾಗು ಪ್ರಾಣಿಗಳು ಟಾಸ್ಕ್ ನಲ್ಲಿ ಬಿಗ್ ಬಾಸ್ ಕಾಡುಮನುಷ್ಯರಿಗೆ ಮರದ ಮೇಲೆ ಇದ್ದ ಹಣ್ಣುಗಳನ್ನು ಪ್ರಾಣಿಗಳಿಂದ ಕಾಪಾಡುವಂತೆ ಹೇಳಿದರು.
ಬಿಗ್ ಬಾಸ್ ಹೇಳಿದಂತೆ ಕಾಡುಮನುಷ್ಯರು ಅದನ್ನುಕಾಯುತ್ತಿರುವಾಗ ಕೋತಿಯ ವೇಷದಲ್ಲಿದ್ದ ದಿವಾಕರ್ ಕಾಡುಮನುಷ್ಯರ ಕಣ್ಣು ತಪ್ಪಿಸಿ ಒಂದು ಹಣ್ಣನ್ನು ಕಿತ್ತು ತಂದರು. ಇದರಿಂದ ಕೋಪಗೊಂಡ ಕಾಡುಮನುಷ್ಯರು ನಾವು ಆ ಕಡೆ ತಿರುಗಿದಾಗ ಹಣ್ಣನ್ನು ಕದ್ದಿದ್ದು ತಪ್ಪು.ಇದು ನಂಬಿಕೆ ದ್ರೋಹ. ಕೋತಿ ದಿವಾಕರ್ ನಂಬಿಕೆದ್ರೋಹಿ ಎಂದು ಹೇಳಿದರು.
ಅದಕ್ಕೆ ಸಮೀರ್ ಆಚಾರ್ಯ ಅವರು ದಿವಾಕರ್ ಅವರನ್ನು ಬೆಂಬಲಿಸಿ ಇದು ಜಾಣ್ಮೆಯಿಂದ ಮಾಡಿದ್ದು, ನಂಬಿಕೆ ದ್ರೋಹ ಅಲ್ಲ . ನೀವು ಜಾಗ್ರತರಾಗಿರಬೇಕಿತ್ತು ಎಂದು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ