Select Your Language

Notifications

webdunia
webdunia
webdunia
webdunia

ಏನೇ ಆದ್ರೂ ಪತಿ ದರ್ಶನ್ ಕೈ ಬಿಡುವವರಲ್ಲ ವಿಜಯಲಕ್ಷ್ಮಿ ಎನ್ನುವುದಕ್ಕೆ ಇದೇ ಸಾಕ್ಷಿ

Darshan Thoogudeepa

Krishnaveni K

ಬಳ್ಳಾರಿ , ಮಂಗಳವಾರ, 17 ಸೆಪ್ಟಂಬರ್ 2024 (10:42 IST)
ಬಳ್ಳಾರಿ: ಪತಿ ದರ್ಶನ್ ಇನ್ನೊಬ್ಬ ಹೆಣ್ಣಿನ ಸಹವಾಸ ಮಾಡಿ ಆಕೆಗಾಗಿ ಹತ್ಯೆ ಮಾಡಿ ಜೈಲು ಸೇರಿದ್ದರೂ ಕೈ ಹಿಡಿದ ಪತ್ನಿ ವಿಜಯಲಕ್ಷ್ಮಿ ಮಾತ್ರ ಯಾವತ್ತೂ ಗಂಡನ ಕೈ ಬಿಡಲಿಲ್ಲ. ಇಂದು ಮತ್ತೊಮ್ಮೆ ಅದು ಸಾಬೀತಾಗುತ್ತಿದೆ.

ಇಂದು ನಟ ದರ್ಶನ್ ಆಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗುತ್ತಿದ್ದು ಮತ್ತೊಮ್ಮೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತಾವಿರುವ ಜೈಲಿನಿಂದಲೇ ಎಲ್ಲಾ ಆರೋಪಿಗಳೂ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ. ಇದಾದ ಬಳಿಕ ಎಲ್ಲಾ ಆರೋಪಿಗಳೂ ಜಾಮೀನಿಗೆ ಅರ್ಜಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಿದ್ದಾರೆ.

ತನ್ನ ಪತಿಯ ಬಿಡುಗಡೆಯಾಗಿ ಶತಾಯ ಗತಾಯ ಪ್ರಯತ್ನ ನಡೆಸುತ್ತಿರುವ ವಿಜಯಲಕ್ಷ್ಮಿ ಈಗಾಗಲೇ ದೇವರ ಮೊರೆ ಹೋಗಿದ್ದಾಗಿದೆ. ಹಲವು ಪ್ರಭಾವಿಗಳನ್ನು ಭೇಟಿ ಮಾಡಿದ್ದಾರೆ. ಪತಿಯನ್ನು ಬಳ್ಳಾರಿ ಜೈಲಿನಲ್ಲಿಟ್ಟರೂ ಪ್ರತೀ ವಾರ ವಕೀಲರ ಜೊತೆ ಬಂದು ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.

ಇಂದೂ ವಿಜಯಲಕ್ಷ್ಮಿ ಪತಿಯ ಭೇಟಿಗಾಗಿ ಬಳ್ಳಾರಿಗೆ ಬರಲಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿಗೆ ಸುಮಾರು 5-6 ಗಂಟೆ ದಾರಿಯಿದೆ. ಹಾಗಿದ್ದರೂ ವಿಜಯಲಕ್ಷ್ಮಿ ಪ್ರತೀ ವಾರ ತಪ್ಪದೇ ಪತಿಯನ್ನು ಭೇಟಿ ಮಾಡುತ್ತಿದ್ದಾರೆ. ಇಂದು ನ್ಯಾಯಾಲಯದ ಕಲಾಪಗಳು ಮುಗಿದ ನಂತರ ವಿಜಯಲಕ್ಷ್ಮಿ ಭೇಟಿ ನೀಡಲಿದ್ದಾರೆ. ಈ ವೇಳೆ ಜಾಮೀನಿಗೆ ಅರ್ಜಿ ಸಲ್ಲಿಸುವ ಸಂಬಂಧ ದರ್ಶನ್ ಜೊತೆ ಚರ್ಚೆ ನಡೆಸಲಿದ್ದಾರೆ. ಅವರಿಗೆ ದರ್ಶನ್ ಸಹೋದರ ದಿನಕರ್ ಕೂಡಾ ಸಾಥ್ ನೀಡುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾನ್ ನಲ್ಲೇ ಪ್ಯಾಂಟ್ ಜಿಪ್ ಓಪನ್ ಮಾಡ್ತಿದ್ದ ಜಾನಿ ಮಾಸ್ಟರ್: ಯುವತಿ ಬಿಚ್ಚಿಟ್ಟ ಶಾಕಿಂಗ್ ವಿಚಾರಗಳು