Webdunia - Bharat's app for daily news and videos

Install App

ಮದ್ಯದಂತೆ ಕಂಡಿತ್ತಷ್ಟೇ, ಮದ್ಯವಲ್ಲ, ನಟ ಬಾಲಯ್ಯ ವಿವಾದಕ್ಕೆ ತೇಪೆ ಹಚ್ಚಿದ ಟೀಂ

Krishnaveni K
ಶುಕ್ರವಾರ, 31 ಮೇ 2024 (12:09 IST)
ಹೈದರಾಬಾದ್: ಇತ್ತೀಚೆಗೆ ಗೋದಾವರಿ ಸಿನಿಮಾ ಈವೆಂಟ್ ನಲ್ಲಿ ಪಾನಮತ್ತರಾಗಿ ನಟ ಬಾಲಯ್ಯ ವೇದಿಕೆಯಲ್ಲಿ ನಟಿ ಅಂಜಲಿಯನ್ನು ತಳ್ಳಿದರು ಎಂಬ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ವಿವಾದಕ್ಕೆ ತೇಪೆ ಹಚ್ಚು ಪ್ರಯತ್ನ ನಡೆದಿದೆ.

ಬಾಲಯ್ಯ ಕಾಲ ಕೆಳಗೇ ಬಾಟಲಿಯಲ್ಲಿ ಮದ್ಯ ತುಂಬಿಕೊಂಡ ಫೋಟೋಗಳು ವೈರಲ್ ಆಗಿತ್ತು. ಬಳಿಕ ವೇದಿಕೆಯಲ್ಲಿ ತನ್ನ ಮಾತು ಕೇಳದ ಅಂಜಲಿಯನ್ನು ಬಾಲಯ್ಯ ತಳ್ಳಿದ್ದು ಭಾರೀ ಸುದ್ದಿಯಾಗಿತ್ತು. ಹೀಗಾಗಿ ಬಾಲಯ್ಯ ಎಣ್ಣೆಯ ಮತ್ತಿನಲ್ಲಿ ನಟಿಯನ್ನು ತಳ್ಳಿದರು ಎಂದು ಸುದ್ದಿಯಾಗಿತ್ತು.

ಆದರೆ ಇದೀಗ ಇದಕ್ಕೆ ಸ್ಪಷ್ಟನೆ ನೀಡಿರುವ ಗೋದಾವರಿ ಸಿನಿಮಾ ತಂಡ, ಅಲ್ಲಿದ್ದಿದ್ದು ಎಣ್ಣೆಬಾಟಲಿಯಲ್ಲ. ಅದು ಹಾಗೆ ಕಂಡಿದ್ದಷ್ಟೇ. ಇದು ಗ್ರಾಫಿಕ್ಸ್ ಮಾಡಿದ ಬಾಟಲಿ’ ಎಂದು ಸ್ಪಷ್ಟನೆ ನೀಡಿದೆ. ಆದರೆ ಈ ಸ್ಪಷ್ಟನೆ ಟೀಕೆಗೊಳಗಾಗಿದೆ.

ಇನ್ನು, ನಟಿ ಅಂಜಲಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದು, ‘ಬಾಲಕೃಷ್ಣ ಅವರು ಗೋದಾವರಿ ಈವೆಂಟ್ ಗೆ ಬಂದಿದ್ದಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಮತ್ತು ಬಾಲಕೃಷ್ಣ ಇಬ್ಬರೂ ಪರಸ್ಪರ ಗೌರವವಿಟ್ಟುಕೊಂಡಿದ್ದೇವೆ. ನಮ್ಮಿಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. ಅವರ ಜೊತೆ ವೇದಿಕೆ ಹಂಚಿಕೊಂಡಿದ್ದು ಖುಷಿಯ ವಿಚಾರ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments