Webdunia - Bharat's app for daily news and videos

Install App

‘ಮುಂಗಾರು ಮಳೆ-2 ‘ ಚಿತ್ರದಲ್ಲಿ ನಟಿಸಿದ ನಟಿ ಶಿಲ್ಪಾ ಮಂಜುನಾಥ್ ಸ್ಯಾಂಡಲ್ ವುಡ್ ಮೇಲೆ ಫುಲ್ ಗರಂ!

Webdunia
ಗುರುವಾರ, 22 ಮಾರ್ಚ್ 2018 (07:17 IST)
ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ‘ಮುಂಗಾರು ಮಳೆ-2 ‘ ಚಿತ್ರದಲ್ಲಿ ನಟಿಸಿದ ನಟಿ ಶಿಲ್ಪಾ ಮಂಜುನಾಥ್ ಅವರು ಇದೀಗ ಸ್ಯಾಂಡಲ್ ವುಡ್ ಮೇಲೆ ಕೋಪಗೊಂಡಿದ್ದು ಅದಕ್ಕೆ ಕಾರಣವೆನೆಂಬುದನ್ನು  ತಿಳಿಸಿದ್ದಾರೆ.


ಈಗಾಗಲೇ ತಮಿಳು, ಮಲಯಾಳಂ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ  ನಟಿ ಶಿಲ್ಪಾ ಮಂಜುನಾಥ್ ಅವರು ಕನ್ನಡದಲ್ಲಿ ಗಣೇಶ್ ಅವರ ಜೊತೆ ನಟಿಸಿದ ‘ಮುಂಗಾರು ಮಳೆ-2 ‘ ಚಿತ್ರ ಹೇಳಿಕೊಳ್ಳುವಂತಹ ಮಟ್ಟಿಗೆ  ಯಶಸ್ಸು ಕಂಡಿರಲಿಲ್ಲ. ಆದ ಕಾರಣ ಅವರಿಗೆ ಕನ್ನಡಕ್ಕಿಂತ ಹೆಚ್ಚಾಗಿ ತಮಿಳು ಸಿನಿಮಾದಲ್ಲೇ ಅವಕಾಶಗಳು ಬರುತ್ತಿವೆಯಂತೆ. ಇದರಿಂದ ಕೋಪಗೊಂಡ ನಟಿ ಶಿಲ್ಪಾ ಮಂಜುನಾಥ್ ಅವರು ತಮಿಳು-ತೆಲುಗು ಚಿತ್ರರಂಗಕ್ಕೆ ಹೋಲಿಕೆ ಮಾಡಿದರೆ ಸ್ಯಾಂಡಲ್ ವುಡ್ ನಲ್ಲಿ ಗ್ಲಾಮರ್ ಗೆ ಹೆಚ್ಚು ಮಹತ್ವ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.


ಈ ಬಗ್ಗೆ ಸ್ಥಳಿಯ ಪತ್ರಿಕೆಯೊಂದರಲ್ಲಿ ಮಾತನಾಡಿದ ಅವರು,’ ನನಗೆ ಸಂಬಂಧವಿಲ್ಲದ ಪಾತ್ರಗಳಿಗಾಗಿ ನಾನು ಹುಡುಕಾಡುತ್ತೇನೆ. ಅದೇ ನನಗೆ ಚಾಲೆಂಜಿಂಗ್. ಆದರೆ ಆ ರೀತಿಯ ಪಾತ್ರ ನಮ್ಮಂಥವರಿಗೆ ಸಿಗುವುದು ತೀರಾ ವಿರಳ. ಹಾಗೂ ಕನ್ನಡದಲ್ಲಿ ಅನುಭವಿ ಕಲಾವಿದರಿಗಿಂತ ಅನಾನುಭವಿ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದೆ. ಅನುಭವಿ ಕಲಾವಿದೆಯ ಸಿನಿಮಾ ಸೋತರೆ, ಅವಳನ್ನು ನೋಡುವ ರೀತಿಯೇ ಬೇರೆ. ಇಂಡಸ್ಟ್ರಿಯಲ್ಲಿ ಗೆದ್ದೆತ್ತಿನ ಬಾಲ ಹಿಡಿದಂತೆ, ಕೆಲವೊಂದಿಷ್ಟು ಮುಖಗಳಿಗೆ ಮಾತ್ರ ಮಣೆ ಹಾಕಲಾಗುತ್ತಿದೆ. ಹಿಟ್ ನಟಿ ಎಂಬ ಕಾರಣಕ್ಕೆ ಅವರಿಗೆ ಮೇಲಿಂದ ಮೇಲೆ ಪ್ರಯೋಗಾತ್ಮಕ ಪಾತ್ರ ನೀಡುತ್ತಾರೆ. ಹಾಗಂತ ಅವಕಾಶ ಕೊಡುವುದು ತಪ್ಪು ಅಂತಲೂ ಹೇಳುತ್ತಿಲ್ಲ. ಬೇರೆ ನಟಿಯರೂ ಇದ್ದಾರೆ. ಅವರನ್ನು ನೋಡಲಿ ಎಂಬುದು ನನ್ನ ಮಾತಿನ ಉದ್ದೇಶ' ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

ಮುಂದಿನ ಸುದ್ದಿ
Show comments