ಸೋತಿದ್ದ ಚಿತ್ರರಂಗಕ್ಕೆ ಬೂಸ್ಟ್ ನೀಡಿದ ರಾಬರ್ಟ್

Webdunia
ಸೋಮವಾರ, 15 ಮಾರ್ಚ್ 2021 (09:49 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಗೆದ್ದಿದೆ. ಜೊತೆಗೆ ಸೋತಿದ್ದ ಚಿತ್ರರಂಗಕ್ಕೂ ಹೊಸ ಉತ್ಸಾಹ ನೀಡಿದೆ.


ಲಾಕ್ ಡೌನ್ ಬಳಿಕ ಚಿತ್ರರಂಗ ತೆರೆದರೂ ಜನ ಥಿಯೇಟರ್ ಗೆ ಬರಲು ಹಿಂದೇಟು ಹಾಕುತ್ತಿದ್ದರು. ಈಗ ಸರ್ಕಾರವನ್ನು ಒಪ್ಪಿಸಿ ಫುಲ್ ಹೌಸ್ ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡರೂ ನಿರ್ಮಾಪಕರಿಗೆ ಒಳಗೊಳಗೇ ಅಳುಕಿತ್ತು.

ಆದರೆ ಆ ಅಳುಕನ್ನೆಲ್ಲಾ ನಿವಾರಿಸಿ ರಾಬರ್ಟ್ ಗೆದ್ದಿದೆ. ಅದೂ ಭರ್ಜರಿ ಗಳಿಕೆ ಮಾಡಿ ಮುಂದಿನ ದಿನಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಹೊರಟಿರುವ ನಿರ್ಮಾಪಕರಿಗೂ ಧೈರ್ಯ ತುಂಬಿದೆ. ಮೂರು ದಿನದಲ್ಲಿ 45 ಕೋಟಿ ರೂ. ಬಾಚಿ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದೆ.

ರಾಬರ್ಟ್ ಬಳಿಕ ಯುವರತ್ನ ಬಿಗ್ ಸ್ಟಾರ್ ಇರುವ ಸಿನಿಮಾ. ಈ ಸಿನಿಮಾ ಏಪ್ರಿಲ್ 1 ಕ್ಕೆ ಥಿಯೇಟರ್ ಗೆ ಬರಲಿದ್ದು, ಈಗಾಗಲೇ ಪವರ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಎದಿರು ನೋಡುತ್ತಿದ್ದಾರೆ. ಈ ಸಿನಿಮಾವೂ ಗೆದ್ದಲ್ಲಿ ಚಿತ್ರರಂಗ ಸಹಜ ಸ್ಥಿತಿಗೆ ಬಂದಿದೆ ಎಂದೇ ಹೇಳಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾಮಾನ್ಯರಂತೆ ಕೇದಾರನಾಥ ಕ್ಷೇತ್ರಕ್ಕೆ ಚಾರಣ ಮಾಡಿ ಅನುಭವಿ ಹಂಚಿಕೊಂಡ ನಟ ಯುವ ರಾಜಕುಮಾರ್

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್‌ಗೆ ಮಾತೃವಿಯೋಗ

ಬಾಬಿ ಜತೆಗಿನ ಪ್ರೀತಿ ಜೀವನದ ಅದ್ಭುತ ಘಳಿಗೆ: ಹಳೆ ಪ್ರೇಮಿ ಬಗ್ಗೆ ಪೂಜಾ ಭಟ್

ಸನಾತನ ಧರ್ಮವೇ ಜೀವನ ವಿಧಾನ: ಉದಯನಿಧಿ ಸ್ಟಾಲಿನ್ ವಿರುದ್ಧ ಸಿಡಿದೆದ್ದ ನಟ ಅರ್ಜುನ್ ಸರ್ಜಾ

ಬಾಲಿವುಡ್ ನಟ ನಟಿಯರ ಜತೆ ಉತ್ತಮ ಒಡನಾಟ ಹೊಂದಿದ್ದ ಕರಣ್ ಜೋಹರ್‌ ಹೀಗ್ಯಾಕೆ ನಡ್ಕೊಂಡ್ರು

ಮುಂದಿನ ಸುದ್ದಿ
Show comments