Publish Date: Thu, 13 Apr 2023 (16:37 IST)
Updated Date: Thu, 13 Apr 2023 (16:39 IST)
ಮಂಗಳೂರು: ಕೆಲವು ದಿನಗಳಿಂದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಅದನ್ನು ರಿಷಬ್ ತಳ್ಳಿ ಹಾಕಿದ್ದೂ ಆಗಿದೆ.
ಆದರೂ ಮತ್ತೆ ಅಂತಹ ಅನುಮಾನ ಮೂಡುತ್ತಲೇ ಇದೆ. ಇದಕ್ಕೆ ಕಾರಣ ರಿಷಬ್ ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿವರನ್ನು ಹೊಗಳಿದ್ದು. ಬೊಮ್ಮಾಯಿಗೆ ಅರಣ್ಯ ಸಿಬ್ಬಂದಿಗಳ ರಕ್ಷಣೆ, ಕಾಡಿನ ಸಂರಕ್ಷಣೆ ಬಗ್ಗೆ ಮನವಿ ಪತ್ರ ನೀಡಿದ್ದ ರಿಷಬ್ ಇಂತಹಾ ಸಿಎಂ ಪಡೆದಿದ್ದು ನಮ್ಮ ಪುಣ್ಯ ಎಂದಿದ್ದರು.
ಇದೀಗ ರಿಷಬ್ ಮತ್ತೆ ಸಿಎಂ ಬೊಮ್ಮಾಯಿವರ ಜೊತೆ ತಮ್ಮ ತವರಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಎಂ ಬೊಮ್ಮಾಯಿ ತಮ್ಮ ಪತ್ನಿಯೊಂದಿಗೆ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿಗೆ ರಿಷಬ್ ಕೂಡಾ ಬಂದಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ತವರಿನಲ್ಲಿ ಬಿಜೆಪಿ ಪರ ರಿಷಬ್ ಸ್ಟಾರ್ ಪ್ರಚಾರಕನಾಗಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಕೇಳಿಬರುತ್ತಿದೆ.