Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಚಿತ್ರರಂಗಕ್ಕೆ ಬಂದು ಎಷ್ಟೋ ಕಷ್ಟ ನೋಡಿದಾಗಲೂ ನಾನು ಇಷ್ಟು ಧೃತಿಗೆಟ್ಟಿರಲಿಲ್ಲ. ಆದರೆ ಅಪ್ಪು ಸಾವು ನನ್ನನ್ನು ವೀಕ್ ಮಾಡಿದೆ ಎಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.
ಪುತ್ರ ಮನುರಂಜನ್ ಸಿನಿಮಾ ರಿಲೀಸ್ ಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ರವಿಚಂದ್ರನ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿನ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
ಡಾ.ರಾಜ್ ಕುಮಾರ್ ಮನೆಗೆ ಏನೇ ಕಷ್ಟ ಬಂದರೂ ನಾವಿದ್ದೇವೆ ಎಂದು ಬಲ ತುಂಬಲು ಇಷ್ಟು ದಿನ ಹೋಗುತ್ತಿದ್ದೆವು. ಆದರೆ ಇದುವರೆಗೆ ಹೋಗುತ್ತಿದ್ದೆವು. ಆದರೆ ಮೊನ್ನೆ ವಿಕ್ರಂ ಆಸ್ಪತ್ರೆಯಲ್ಲಿ ಅಪ್ಪುನ ಸಾವು ನೋಡಿದ ಮೇಲೆ ಮೊದಲ ಬಾರಿಗೆ ವೀಕ್ ಆದೆ ಎನಿಸಿತು. ಆವತ್ತು ಒಂದು ಕಡೆ ನನ್ನ ಹೆಂಡತಿ ಫೋನ್ ಮಾಡಿ ಅಮ್ಮನಿಗೆ ಹುಷಾರಿಲ್ಲ ಐಸಿಯುಗೆ ಸೇರಿಸಲಾ ಎಂದು ಕೇಳುತ್ತಿದ್ದಳು. ಇನ್ನೊಂದು ಕಡೆ ಅಪ್ಪು ಬಗ್ಗೆ ಸುದ್ದಿ ಬಂದಿತ್ತು. ಆವತ್ತು ಆದಷ್ಟು ವೀಕ್ ಅಂತ ನನಗೆ ಯಾವತ್ತೂ ಅನಿಸಿರಲಿಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ.