Publish Date: Wed, 17 Jun 2020 (08:54 IST)
Updated Date: Wed, 17 Jun 2020 (08:56 IST)
ಬೆಂಗಳೂರು: ಬಹುಮುಖ ಪ್ರತಿಭೆಯ ನಟ ರಮೇಶ್ ಅರವಿಂದ್ ಅದ್ಭುತ ಮಾತುಗಾರ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಅವರ ಮಾತಿನ ಕಲೆ ಯಾವ ವಾಕ್ಪಟುವಿಗೂ ಕಮ್ಮಿಯಿಲ್ಲ.
ಕೇವಲ ಸಿನಿಮಾ ಮಾತ್ರವಲ್ಲ, ಶಿಕ್ಷಣ, ಜೀವನ ಶೈಲಿ, ಕಲೆ ಬಗ್ಗೆಯೂ ರಮೇಶ್ ನಿರರ್ಗಳವಾಗಿ ಮಾತಾಡಬಲ್ಲರು. ಇಂತಿಪ್ಪ ರಮೇಶ್ ಅರವಿಂದ್ ಈಗ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ!
ವಿಜಯೀ ಭವ ಯೂ ಟ್ಯೂಬ್ ಮುಖಾಂತರ ಇಂದು 10.30 ಕ್ಕೆ ಇದು ಪ್ರಸಾರವಾಗಲಿದ್ದು, ರಮೇಶ್ ಅರವಿಂದ್ ಯಶಸ್ಸಿನ ಸೂತ್ರಗಳ ಬಗ್ಗೆ ವಿದ್ಯಾರ್ಥಿಗಳ ಜತೆ ವೀಕ್ ಡೇ ವಿತ್ ರಮೇಶ್ ಎಂಬ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.