Publish Date: Tue, 22 Mar 2022 (09:30 IST)
Updated Date: Tue, 22 Mar 2022 (09:45 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜಾತಿ, ಮತ ಮೀರಿದ ಅಭಿಮಾನಿಗಳಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
ಕೊಪ್ಪಳದಲ್ಲಿ ನಡೆದ ಮುಸ್ಲಿಂ ಧರ್ಮೀಯರ ಉರುಸ್ ಕಾರ್ಯಕ್ರಮದಲ್ಲಿ ಕೆಲವು ಅಭಿಮಾನಿಗಳು ಪುನೀತ್ ಫೋಟೋ ಹಿಡಿದು ಮೆರವಣಿಗೆ ಮಾಡಲಾಗಿದೆ.
ಇದಕ್ಕೂ ಮೊದಲು ಹಿಂದೂ ಧರ್ಮೀಯರ ಜಾತ್ರೆ, ದೇವಾಲಯಗಳ ಉತ್ಸವಗಳಲ್ಲಿ ಪುನೀತ್ ಫೋಟೋ ಹಿಡಿದು ಅಭಿಮಾನಿಗಳು ಮೆರವಣಿಗೆ ಮಾಡಿದ್ದನ್ನು ನೋಡಿದ್ದೇವೆ. ಇದೀಗ ಉರುಸ್ ಕಾರ್ಯಕ್ರಮದಲ್ಲೂ ಅಭಿಮಾನಿಗಳು ಪುನೀತ್ ಫೋಟೋ ತೆಗೆದುಕೊಂಡು ಹೋಗಿರುವುದು ನೋಡಿದರೆ ಅವರ ಮೇಲಿನ ಪ್ರೀತಿ ಧರ್ಮಾತೀತ ಎಂದು ಸಾಬೀತಾಗಿದೆ.