Webdunia - Bharat's app for daily news and videos

Install App

ಸುಪ್ರಿತಾಳ ಗಂಡ ಯಾರೆಂದು ಹೇಳದಿರುವ ಲಕ್ಷ್ಮಿ ಬಾರಮ್ಮಗೆ ಹೋಗಿ ಬಾರಮ್ಮ ಎಂದ ನೆಟ್ಟಿಗರು

Sampriya
ಶುಕ್ರವಾರ, 11 ಏಪ್ರಿಲ್ 2025 (16:41 IST)
Photo Courtesy X
ಬೆಂಗಳೂರು: ಕಲರ್ಸ್ ಕನ್ನಡದ ಟಾಪ್‌ ಸೀರಿಯಲ್‌ಗಳಲ್ಲಿ ಒಂದಾಗಿದ್ದ ಲಕ್ಷ್ಮಿ ಬಾರಮ್ಮ ಇದೀಗ ಹೊಸ ಸೀರಿಯಲ್‌ಗಾಗಿ ಅಂತ್ಯವನ್ನು ಹಾಡುತ್ತಿದೆ. ಆರಂಭದಿಂದಲೂ ಒಳ್ಳೆಯ ಕಥೆ ಹಾಗೂ ನೈಜ ಅಭಿನಯದ ಮೂಲಕ ಸೀರಿಯಲ್ ಪ್ರಿಯರ ಮನ ಗೆದ್ದಿದ್ದ ಲಕ್ಷ್ಮಿ ಬಾರಮ್ಮ ಇದೀಗ ಕಾವೇರಿ ಸಾವಿನ ಮೂಲಕ  ಅಂತ್ಯಗೊಳ್ಳುತ್ತಿದೆ.

ಒಳ್ಳೆಯ ಟಿಆರ್‌ಪಿಯೊಂದಿಗೆ ಪ್ರಸಾರಗೊಳ್ಳುತ್ತಿದ್ದ ಲಕ್ಷ್ಮಿ ಬಾರಮ್ಮಗೆ ಈಚೆಗೆ ಭಾರೀ ಟೀಕೆಗಳು ವ್ಯಕ್ತವಾಗಿ, ಟ್ರೋಲ್‌ಗೆ ಒಳಗಾಗಿದೆ. ಇದೀಗ ಸೀರಿಯಲ್ ಅಂತ್ಯಗೊಳ್ಳುತ್ತಿದ್ದರು, ಪ್ರೇಕ್ಷಕರು ಮಾತ್ರ ಸೀರಿಯಲ್‌ನ ಕೊನೆಯ ಸಂಚಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಸೀರಿಯಲ್‌ನ ಪ್ರಮುಖ ಪಾತ್ರಗಳಲ್ಲಿ ಒಂದಾಗಿದ್ದ ಸುಪ್ರೀತಾಳ ಗಂಡ ಯಾರೆಂದು ಹೇಳದೆ, ಕೀರ್ತಿಯ ಅಪ್ಪನನ್ನು ತೋರಿಸದೆ, ಕೇವಲ ಕಾವೇರಿಯ ಕ್ರೌರ್ಯದ ಬಗ್ಗೆಯೇ ತೋರಿಸಿ, ಇದೀಗ ಅಂತ್ಯಗೊಳ್ಳುತ್ತಿದೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.

ಇಂದು ಕಲರ್ಸ್ ಕನ್ನಡ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಪ್ರೋಮೋ ವಿಡಿಯೋ ನೋಡಿ, ಲಕ್ಷ್ಮಿ ಬಾರಮ್ಮ, ಒಮ್ಮೆ ಹೋಗಮ್ಮ ಎಂದು ತಮಾಷೆ ಮಾಡಿದ್ದಾರೆ. ಒಟ್ಟಾರೆ ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡುವವರಿಗೆ ತಮ್ಮ ನೆಚ್ಚಿನ ಸೀರಿಯಲ್ ಮುಗಿಯುವುದು ಬೇಜಾರು ನೀಡುತ್ತಿದ್ದರೆ, ಮತ್ತೇ ಕೆಲವರು ಸೀರಿಯಲ್ ಮುಗಿಯುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.






ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಮುಂದಿನ ಸುದ್ದಿ
Show comments