Select Your Language

Notifications

webdunia
webdunia
webdunia
webdunia

ದರ್ಶನ್‌ಗಾಗಿ ಪೂಜೆ ಮಾಡುತ್ತಿದ್ದರೆ ನಾನು ಬರ್ತಿರ್ಲಿಲ್ಲ: ನಟ ಜಗ್ಗೇಶ್

Jaggesh

Sampriya

ಬೆಂಗಳೂರು , ಬುಧವಾರ, 14 ಆಗಸ್ಟ್ 2024 (17:44 IST)
Photo Courtesy X
ಬೆಂಗಳೂರು: ಈ  ಪೂಜೆ ದರ್ಶನ್‌ಗೋಸ್ಕರ ಮಾಡುತ್ತಿದ್ದರೆ ನಾನು ಬರುತ್ತಿರಲಿಲ್ಲ ಎಂದು ನಟ ಜಗ್ಗೇಶ್ ಅವರು ಇಂದು ಕಲಾವಿದರ ಸಂಘದಲ್ಲಿ ಹಮ್ಮಿಕೊಂಡಿದ್ದ ಹೋಮ ಹವನದಲ್ಲಿ ಭಾಗಿ ಮಾತನಾಡಿದರು.  

ಚಿತ್ರರಂಗದ ಏಳಿಗೆಗಾಗಿ ಇಂದು ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆಯ ಕಾರ್ಯಕ್ರಮ ನಡೆಸಲಾಯಿತು. ಈ ಮಹಾಯಾಗವನ್ನು ದರ್ಶನ್‌ಗೋಸ್ಕರ ಮಾಡಲಾಗುತ್ತಿದೆ ಎಂಬ ಮಾತು ಹರಿದಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ ಅವರು,  ದರ್ಶನ್‌ಗೋಸ್ಕರ ಪೂಜೆ ಮಾಡಿದ್ರೆ ನಾನು ಬರುತ್ತಿರಲಿಲ್ಲ. ಆದರೆ ಈ ಪೂಜೆ ದರ್ಶನ್‌ಗಾಗಿ ಅಲ್ಲ, ಕಲಾವಿದರ ಒಳಿತಿಗಾಗಿ ಮಾಡಿರೋದು. ನನಗೂ ಬೇರೆ ಬೇರೆ ವಲಯದಿಂದ ಕರೆ ಮಾಡಿ ಕೇಳಿದ್ದರು. ನನಗೂ ಈ ಬಗ್ಗೆ ಡೌಟ್ ಇತ್ತು. ಮಾಹಿತಿ ಪಡೆದೆ. ಆದರೆ ಈ ಪೂಜೆ ಒಟ್ಟು ನಮ್ಮ ಚಿತ್ರರಂಗದ ಬೆಳವಣಿಗೆಗೆ ಎಂದರು.

ಇನ್ನೂ ಪೂಜೆಯಲ್ಲಿ ನಾಗದೇವದರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ಆಧ್ಯಾತ್ಮಕವಾಗಿ  ನಾವು ಇದ್ದೇವೆ. ದೇವರು ನಂಬಿರುವವರ ಬೆಳವಣಿಗೆ ಹೇಗಿದೆ, ನಂಬದೇ ಇರುವವರ ಬೆಳವಣಿಗೆ ಹೇಗಿದೆ ನೋಡಿ ಎಲ್ಲರಿಗೂ ಅಲ್ಲೇ ಉತ್ತರ ಸಿಗುತ್ತದೆ ಎಂದು ಜಗ್ಗೇಶ್ ಮಾತನಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಪೂಜೆಯಲ್ಲಿ ದರ್ಶನ್‌ಗಾಗಿ ಬೇಡಿಕೊಂಡರೆ ತಪ್ಪೇನು: ಗಿರಿಜಾ ಲೋಕೇಶ್