Publish Date: Fri, 21 Aug 2020 (11:02 IST)
Updated Date: Fri, 21 Aug 2020 (11:04 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ದಿನಕ್ಕೊಂದು ಊಹಾಪೋಹಗಳು, ಹೇಳಿಕೆಗಳು ಕೇಳಿಬರತೊಡಗಿವೆ.
ಬಾಲಿವುಡ್ ನಟನ ಸಾವಿಗೆ ದುಬೈ ಅಂಡರ್ವಲ್ಡ್ ಲಿಂಕ್ ಇರಬಹುದು ಎಂಬ ಗುಮಾನಿಯನ್ನು ಬಿಜೆಪಿ ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಕಾರಣ ಇಲ್ಲವೇ ದುಬೈ ಸುಪಾರಿ ಕಿಲ್ಲರ್ ಗಳಿಂದ ಈ ಕೃತ್ಯ ನಡೆದಿರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಟ ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.