Webdunia - Bharat's app for daily news and videos

Install App

ಪಾರ್ಟಿ ಮಾಡುತ್ತಿದ್ದ ದರ್ಶನ್ ಮೊಬೈಲ್ ವಿಡಿಯೋ ನೋಡಿ ಶಾಕ್ ಆಗ್ತಾರೆ

Krishnaveni K
ಶನಿವಾರ, 22 ಜೂನ್ 2024 (14:26 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಹಲವು ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ದರ್ಶನ್ ಏನು ಮಾಡಿದ್ರು, ಮೊಬೈಲ್ ಗೆ ಬಂದ ವಿಡಿಯೋ ಶಾಕ್ ಆದ ಬಗ್ಗೆ ಈಗ ಮಾಹಿತಿ ಹೊರಬಿದ್ದಿದೆ.

ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ಬಳಿಕ ಪವಿತ್ರಾ ಗೌಡರೊಂದಿಗೆ ಅಲ್ಲಿಂದ ಹೊರಟಿದ್ದ ದರ್ಶನ್ ಆಕೆಯನ್ನು ಮನೆಗೆ ಬಿಟ್ಟು ತಾನು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡಲು ಬರುತ್ತಾರೆ. ಅಲ್ಲಿಗೆ ಚಿಕ್ಕಣ್ಣರನ್ನು ಕರೆದಿದ್ದಾರೆ. ಇಲ್ಲಿ ಪಾರ್ಟಿ ಮಾಡುತ್ತಿದ್ದಾಗ ವಿನಯ್ ಮೊಬೈಲ್ ಗೆ ರೇಣುಕಾಸ್ವಾಮಿ ಶೆಡ್ ನಲ್ಲಿ ಸತ್ತು ಬಿದ್ದ ವಿಡಿಯೋವನ್ನು ಪವನ್ ಕಳುಹಿಸಿರುತ್ತಾರೆ. ಅದನ್ನು ದರ್ಶನ್ ಗೆ ವಿನಯ್ ತೋರಿಸಿ ನೀವು ಹೇಳಿದ ವ್ಯಕ್ತಿ ಇವನೇನಾ ಎಂದು ತೋರಿಸುತ್ತಾನೆ.

ವಿಡಿಯೋ ನೋಡಿದ ದರ್ಶನ್ ಏನು ಮಾಡಿದ್ರಿ ಎಂದು ಗಾಬರಿಯಾಗುತ್ತಾರೆ. ಬಳಿಕ ಗಾಬರಿಯಿಂದಲೇ ಶೆಡ್ ಗೆ ಹೋಗುತ್ತಾರೆ ಎಂದು ತಿಳಿದುಬಂದಿದೆ. ವಿನಯ್ ಮೊಬೈಲ್ ಗೆ ಈ ವಿಡಿಯೋ ಕಳುಹಿಸಿದವರು ಯಾರು ಎಂದು ಪೊಲೀಸರು ತನಿಖೆ ಮಾಡಿದ್ದಾರೆ. ಇದೂ ಕೂಡಾ ಈಗ ಪ್ರಮುಖ ಸಾಕ್ಷ್ಯವಾಗಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರ ಮೊಬೈಲ್ ಗಳನ್ನೂ ಪೊಲೀಸರು ಕಲೆ ಹಾಕಿ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. ನಿನ್ನೆ ಇನ್ನೊಬ್ಬ ಆರೋಪಿ ಕಾರ್ತಿಕ್ ಮೊಬೈಲ್ ನ್ನೂ ವಶಪಡಿಸಿಕೊಳ್ಳಲಾಗಿತ್ತು. ಇದನ್ನು ದೀಪಕ್ ಶೆಡ್ ನಲ್ಲಿ ಅಡಗಿಸಿಟ್ಟಿದ್ದ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments