Select Your Language

Notifications

webdunia
webdunia
webdunia
webdunia

ದರ್ಶನ್ ಬಚಾವ್ ಮಾಡಲು ಆಪ್ತರು ಮಾಡಿದ್ದ ಭಾರೀ ಸಂಚು ಬಯಲು

Darshan

Krishnaveni K

ಬೆಂಗಳೂರು , ಸೋಮವಾರ, 9 ಸೆಪ್ಟಂಬರ್ 2024 (11:22 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ರನ್ನು ಬಚಾವ್ ಮಾಡಲು ಅವರ ಆಪ್ತರು ದೊಡ್ಡ ಪ್ಲ್ಯಾನ್ ನ್ನೇ ಮಾಡಿದ್ದರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ನಟ ದರ್ಶನ್ ಗೆ ರಾಜಕೀಯ, ಸಿನಿಮಾ ರಂಗದಲ್ಲಿ ಪ್ರಭಾವಿಗಳ ಸ್ನೇಹ ಸಂಬಂಧವಿದೆ. ಇವರನ್ನು ಬಳಸಿಕೊಂಡು ದರ್ಶನ್ ತಮ್ಮ  ವಿರುದ್ಧ ಬಂದಿರುವ ಆರೋಪದಿಂದ ಬಚಾವ್ ಆಗಲು ಸಾಕಷ್ಟು ಪ್ರಯತ್ನ ನಡೆಸಿದ್ದರಂತೆ. ಇದಕ್ಕಾಗಿ ತಮ್ಮ ಆಪ್ತರ ಮೂಲಕ ಎಸ್ ಪಿಪಿ ಬದಲಾವಣೆಗೆ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸರ್ಕಾರೀ ಅಭಿಯೋಜಕರಾಗಿ ಖ್ಯಾತ ವಕೀಲ ಪ್ರಸನ್ನಕುಮಾರ್ ಅವರನ್ನು ನೇಮಿಸಲಾಗಿದೆ. ಪ್ರಸನ್ನಕುಮಾರ್ ಅತ್ಯಂತ ನಿಪುಣ ವಕೀಲರಾಗಿದ್ದು, ಅವರು ವಾದ ಮಾಡಿದರೆ ತಮಗೆ ಹಿನ್ನಡೆಯಾಗಬಹುದು ಎಂದು ದರ್ಶನ್ ಲೆಕ್ಕಾಚಾರ ಹಾಕಿದ್ದರು.

ಇದಕ್ಕಾಗಿ ಪ್ರಭಾವಿಗಳ ಮೂಲಕ ಅವರ ಬದಲಾವಣೆಗೆ  ಪ್ರಯತ್ನ ನಡೆಸಿದ್ದರಂತೆ. ಆದರೆ ಸರ್ಕಾರ ಈ ವಿಚಾರದಲ್ಲಿ ಅಚಲವಾಗಿ ನಿಂತಿದೆ. ಪ್ರಸನ್ನಕುಮಾರ್ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದಿತ್ತು. ಇದು ದರ್ಶನ್ ಆಂಡ್ ಗ್ಯಾಂಗ್ ಗೆ ದೊಡ್ಡ ಹಿನ್ನಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿಯ ಚ್ಯಾಟ್ ವಿಚಾರವೇ ದರ್ಶನ್ ಗೆ ಪ್ಲಸ್ ಪಾಯಿಂಟ್ ಆಗುತ್ತಾ