Webdunia - Bharat's app for daily news and videos

Install App

ಬೇಲ್ ಪಡೆದು ಹಾಯಾಗಿರುವ ದರ್ಶನ್ ಗೆ ಉರಿಯುವಂತೆ ಮಾಡಿದ ಪೊಲೀಸರ ನಿರ್ಧಾರ

Krishnaveni K
ಸೋಮವಾರ, 30 ಡಿಸೆಂಬರ್ 2024 (10:50 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ರೆಗ್ಯುಲರ್ ಜಾಮೀನು ಪಡೆದು ಮನೆಯಲ್ಲಿರುವ ನಟ ದರ್ಶನ್ ಗೆ ಪೊಲೀಸರ ಈ ನಿರ್ಧರ ಉರಿಯುವಂತೆ ಮಾಡಲಿದೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಐದೂವರೆ ತಿಂಗಳು ಜೈಲು ವಾಸ ಅನುಭವಿಸಿದ ನಟ ದರ್ಶನ್ ಆರೋಗ್ಯದ ನೆಪದಲ್ಲಿ ಮೊದಲು ಮಧ್ಯಂತರ ಜಾಮೀನು ಪಡೆದರು. ಇದೀಗ ಹೈಕೋರ್ಟ್ ಅವರಿಗೆ ರೆಗ್ಯುಲರ್ ಜಾಮೀನನ್ನೂ ನೀಡಿದೆ. ಇದರ ಬೆನ್ನಲ್ಲೇ ದರ್ಶನ್ ಫಾರ್ಮ್ ಹೌಸ್ ಗೆ ಅನುಮತಿ ಪಡೆದು ತೆರಳಿದ್ದು ಕುಟುಂಬ ಸದಸ್ಯರೊಂದಿಗೆ ಹಾಯಾಗಿದ್ದಾರೆ.

ಈ ನಡುವೆ ಅವರು ಮತ್ತೆ ಸಂಕ್ರಾಂತಿ ಬಳಿಕ ಶೂಟಿಂಗ್ ನಲ್ಲೂ ಭಾಗಿಯಾಗಲಿರುವ ಸುದ್ದಿಗಳು ಬಂದಿತ್ತು. ಆದರೆ ಪೊಲೀಸರು ಬೇರೆಯೇ ಲೆಕ್ಕಾಚಾರ ಹಾಕಿದ್ದು ದರ್ಶನ್ ಗೆ ಬೇಲ್ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಇದೇ ವಾರ ಮೇಲ್ಮನವಿ ಸಲ್ಲಿಸಲಿದ್ದಾರೆ. ಇದಕ್ಕೆ ಗೃಹ ಇಲಾಖೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ.

ದರ್ಶನ್ ವಿರುದ್ಧ ಹಲ್ಲೆ, ಕೊಲೆ, ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿದ ಆರೋಪ ಮತ್ತು ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ ಆರೋಪಗಳಿವೆ. ಇಷ್ಟೆಲ್ಲಾ ಆರೋಪಗಳಿದ್ದ ವ್ಯಕ್ತಿ ಪ್ರಭಾವಿಯಾಗಿದ್ದು ಆತನಿಗೆ ಬೇಲ್ ನೀಡಿರುವದರಿಂದ ಕೇಸ್ ಹಳ್ಳ ಹಿಡಿಯಬಹುದು ಎಂಬುದು ಪೊಲೀಸರ ಆತಂಕವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sitare Zameen Par: ಸಿನಿಮಾ ಬಾಯ್ಕಾಟ್ ಭಯಕ್ಕೆ ಎಕ್ಸ್ ಪೇಜ್ ಗೆ ತ್ರಿವರ್ಣ ಧ್ವಜ ಹಾಕಿದ ಅಮೀರ್ ಖಾನ್ ಸಂಸ್ಥೆ

Archana Udupa: ಅರ್ಚನಾ ಉಡುಪಗೆ ಕ್ಯಾನ್ಸರ್ ನಿಜಾನಾ: ಗಾಯಕಿ ಹೇಳಿದ್ದೇನು

Puneet Rajkumar: ನಟ ಪುನೀತ್ ಮಗಳಿಗೆ ವಿದೇಶದಲ್ಲಿ ಸಿಕ್ತು ಪದವಿ, ಓದಿದ್ದೇನು ಗೊತ್ತಾ

Ravana Cinema: ರಾವಣನ ಪತ್ನಿಯಾಗಿ ಯಶ್‌ಗೆ ಜೋಡಿಯಾದ ಕಾಜಲ್ ಅಗರ್ವಾಲ್‌

Gajendra Saramanige: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟ ಗಜೇಂದ್ರ ಮರಸಣಿಗೆ

ಮುಂದಿನ ಸುದ್ದಿ
Show comments