Webdunia - Bharat's app for daily news and videos

Install App

BBK11: ಧನರಾಜ್ ಗೆ ಹೊಡೆದ ರಜತ್, ಬಿಗ್ ಬಾಸ್ ನಲ್ಲಿ ಮತ್ತೊಂದು ಅವಾಂತರ (video)

Krishnaveni K
ಶುಕ್ರವಾರ, 13 ಡಿಸೆಂಬರ್ 2024 (11:13 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಯಾಕೋ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಈ ಬಾರಿ ಮತ್ತೊಬ್ಬ ಸ್ಪರ್ಧಿಯಿಂದ ಹಲ್ಲೆ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಒಬ್ಬರು ಔಟ್ ಆಗಿದ್ದಾರೆ ಎಂಬ ಸುದ್ದಿಯೂ ಇದೆ. ಏನಾಗಿದೆ ನೋಡಿ.

ಬಿಗ್ ಬಾಸ್ ಕನ್ನಡ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿರುವ ರಜತ್ ಆರಂಭದಿಂದಲೂ ಆಕ್ರಮಣಕಾರೀ ವರ್ತನೆ ತೋರುತ್ತಲೇ ಇದ್ದಾರೆ. ಈ ವಾರ ರಜತ್ ಮತ್ತು ಧನರಾಜ್ ನಡುವೆ ವಾರದ ನಡುವೆ ಜಗಳವಾಗಿತ್ತು. ಇದೀಗ ಮತ್ತೊಮ್ಮೆ ಕಳಪೆ, ಉತ್ತಮ ಕೊಡುವಾಗ ಇಬ್ಬರ ನಡುವೆ ಜಗಳವಾಗಿದೆ.

ರಜತ್ ಗೆ ಧನರಾಜ್ ಕಳಪೆ ನೀಡಿದ್ದು ಇದಕ್ಕೆ ಅವರು ನೀಡಿದ ಕಾರಣಗಳನ್ನು ಕೇಳಿ ರಜತ್ ರೊಚ್ಚಿಗೆದ್ದಿದ್ದಾರೆ. ನಾನು ನಿನ್ನೆ ಹುಟ್ಟಿ ಈವತ್ತು ಬಿಗ್ ಬಾಸ್ ಗೆ ಬಂದಿಲ್ಲ ಕಣೋ. ನನಗೆ ಹತ್ತಿದ್ದಿದ್ದಕ್ಕೆ ನಿನ್ನ ಮುಖ, ಮೂತಿ ಹೊಡೆದು ಹಾಕ್ಬೇಕಿತ್ತು ಎಂದು ಆವಾಜ್ ಹಾಕಿದ್ದಾರೆ. ಇದಕ್ಕೆ ಧನರಾಜ್ ಕೂಡಾ ತಾಕತ್ತಿದ್ದರೆ ಹೊಡಿರೀ ನೋಡೋಣ ಅಂತಾರೆ.

ಆಗ ರಜತ್ ಕೋಪಗೊಂಡು ನೇರವಾಗಿ ಹೊಡೆಯಲೇ ಹೋಗುತ್ತಾರೆ. ಆಗ ಮನೆಯವರೆಲ್ಲಾ ಓಡಿ ರಜತ್ ಬೇಡ ಎಂದು ತಡೆಯಲು ಹೋಗುತ್ತಾರೆ. ಈ ಪ್ರೋಮೋವನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದ್ದು ನಿಜವಾಗಿಯೂ ರಜತ್ ಹೊಡೆದಿದ್ದಾರಾ, ಈ ಕಾರಣಕ್ಕೆ ಅವರನ್ನು ಹೊರಹಾಕಿದ್ದಾರಾ ಎನ್ನುವುದು ಇಂದಿನ ಎಪಿಸೋಡ್ ನಲ್ಲಿ ಸ್ಪಷ್ಟವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

ಮುಂದಿನ ಸುದ್ದಿ
Show comments