Webdunia - Bharat's app for daily news and videos

Install App

ಬಿಬಿಕೆ11: ಸಸ್ಯಾಹಾರಿ ಧನರಾಜ್ ಗೆ ಚಿಕನ್ ತಿನಿಸಿ ತಮಾಷೆ ಮಾಡಿದ ಸ್ಪರ್ಧಿಗಳು

Krishnaveni K
ಬುಧವಾರ, 25 ಡಿಸೆಂಬರ್ 2024 (10:39 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಶುದ್ಧ ಸಸ್ಯಾಹಾರಿಯಾಗಿರುವ ಧನರಾಜ್ ಆಚಾರ್ ಗೆ ಚಿಕನ್ ತಿನಿಸಿ ಮನೆಯವರು ತಮಾಷೆ ಮಾಡಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹಲ್ ಚಲ್ ಸೃಷ್ಟಿಸಿದೆ.

ಟಾಸ್ಕ್ ನಡುವೆ ಸಹ ಸ್ಪರ್ಧಿಗಳು ನೀಡಿದ ಆಹಾರವನ್ನು ಧನರಾಜ್ ಸೇವಿಸುತ್ತಾರೆ. ಆಗ ಭವ್ಯಾ ಅದು ಚಿಕನ್ ಎಂದು ನಗುತ್ತಾ ಹೇಳುತ್ತಾರೆ. ಶಾಕ್ ಆದ ಧನರಾಜ್ ಸಹ ಸ್ಪರ್ಧಿ ರಜತ್ ಗೆ ಕೇಳುತ್ತಾರೆ. ಹೌದು ಎಂದು ರಜತ್ ಹೇಳಿದಾಗ ಸೀದಾ ಕಿಚನ್ ಸಿಂಕ್ ಬಳಿ ಓಡುವ ಧನರಾಜ್ ಬಾಯಿ ತೊಳೆದುಕೊಳ್ಳುತ್ತಾರೆ.

ಆಗ ಉಳಿದ ಸ್ಪರ್ಧಿಗಳು ಜೋರಾಗಿ ನಗುತ್ತಾರೆ. ರಜತ್ ಹೋಗಿ ಗಂಜಲ ಹಾಕಿಕೊಂಡು ಬಾಯಿ ತೊಳ್ಕೋ ಎಂದು ಅಪಹಾಸ್ಯ ಮಾಡುತ್ತಾರೆ. ಇದರ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಆಹಾರ ಎನ್ನುವುದು ಅವರವರ ಆಯ್ಕೆ. ಈ ವಿಚಾರದಲ್ಲಿ ಯಾಕೆ ಅವರನ್ನು ಉಳಿದ ಸ್ಪರ್ಧಿಗಳು ಅಪಹಾಸ್ಯ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಮತ್ತೆ ಕೆಲವರು ಬಿಗ್ ಬಾಸ್ ಗೆ ಬಂದ ಮೇಲೆ ಎಲ್ಲವನ್ನೂ ಬಿಡಬೇಕು, ಮಡಿವಂತಿಕೆ ಇದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಏನೇ ಆದರೂ ಚಿಕನ್ ತಿಂದ ಮೇಲೆ ಅಪರಾಧಿ ಪ್ರಜ್ಞೆಯಿಂದ ಧನರಾಜ್ ದೇವರಿಗೆ ಅಡ್ಡಬಿದ್ದು ಕ್ಷಮೆ ಯಾಚಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಮುಂದಿನ ಸುದ್ದಿ
Show comments