Webdunia - Bharat's app for daily news and videos

Install App

ರಕ್ಷಿತ್ ಶೆಟ್ಟಿಗೆ ಬಂಧನ ವಾರಂಟ್: ‘ಕಿರಿಕ್’ ವಿವಾದದ ಬಗ್ಗೆ ರಕ್ಷಿತ್ ಶೆಟ್ಟಿ ಸುದೀರ್ಘ ಸ್ಪಷ್ಟನೆ

Webdunia
ಬುಧವಾರ, 26 ಫೆಬ್ರವರಿ 2020 (09:57 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ 9 ನೇ ಎಸಿಎಂಎಂ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದ್ದು, ಈ ವಿವಾದದ ಬಗ್ಗೆ ರಕ್ಷಿತ್ ಸರಣಿ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.


ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಶಾಂತಿ ಕ್ರಾಂತಿ ಸಿನಿಮಾದ ಹಾಡೊಂದನ್ನು ಬಳಸಲಾಗಿದೆ ಎಂದು ಲಹರಿ ಸಂಸ್ಥೆ ನೀಡಿದ್ದ ದೂರಿನನ್ವಯ ಕೃತಿ ಚೌರ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಮತ್ತು ಅವರ ಪರಂವಾ ಸ್ಟುಡಿಯೋ ವಿರುದ್ಧ ವಾರಂಟ್ ಜಾರಿ ಮಾಡಲಾಗಿದೆ.

ಆದರೆ ಈ ವಿವಾದದ ಬಗ್ಗೆ ಸರಣಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ರಕ್ಷಿತ್ ಈ ಪ್ರಕರಣ ಕಿರಿಕ್ ಪಾರ್ಟಿ ಬಿಡುಗಡೆ ಸಂದರ್ಭದಲ್ಲೇ ಕೇಸು ದಾಖಲಾಗಿ ಅದನ್ನು ನಾವು ಸಿವಿಲ್ ಮತ್ತು ಹೈ ಕೋರ್ಟ್ ಮೂಲಕ ಜಯವನ್ನೂ ಪಡೆದಿದ್ದೆವು. ಅದರ ಸಂಬಂಧ ಮತ್ತೆ ಈಗ ದೂರು ನೀಡುವ ಅಗತ್ಯವೇನಿತ್ತು. ವಿಶೇಷವೆಂದರೆ ಈ ದೂರನ್ನು ಆರು ತಿಂಗಳ ಹಿಂದೆ ದಾಖಲಿಸಲಾಗಿದೆ. ಆದರೆ ನಮಗೆ ಅಥವಾ ನಮ್ಮ ಲಾಯರ್ ಗೆ ಈ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಯಾಕೆ?

ಅಂದು ಕಿರಿಕ್ ಪಾರ್ಟಿ ರಿಲೀಸ್ ಆಗುವ ಹಿಂದಿನ ದಿನ ಈ ಪ್ರಕರಣ ದಾಖಲಾಗಿತ್ತು. ಆಗ ನಾವು ನಮ್ಮ ಹಾಡನ್ನು ಮರಳಿ ಪಡೆಯಲು ಕೋರ್ಟ್ ನಲ್ಲಿ ಹೋರಾಡಬೇಕಾಗಿತ್ತು. ಅದೃಷ್ಟವಶಾತ್ ಕೋರ್ಟ್ ನಲ್ಲಿ ಜಯಗಳಿಸಿ ಎರಡನೇ ವಾರದಿಂದ ಈ ಹಾಡನ್ನು ಸಿನಿಮಾದಲ್ಲಿ ಸೇರ್ಪಡೆ ಮಾಡಿದ್ದೆವು. ಒಂದು ವರ್ಷದ ಬಳಿಕ ನಾವು ಕೋರ್ಟ್ ಕೇಸ್ ನಲ್ಲಿ ಜಯಗಳಿಸಿದ್ದೆವು. ಇದೆಲ್ಲವೂ ನಮಗೆ ಹೊಸ ಅನುಭವವಾಗಿತ್ತು. ಇದೆಲ್ಲಾ ಯಾಕಾಗಿ ಎಂದು ಗೊತ್ತಾಗುತ್ತಿಲ್ಲ ಎಂದು ರಕ್ಷಿತ್ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತನ್ನ ಡೀಪ್‌ಪೇಕ್‌ ಮಾಡುವವರಿಗೆ ಕಾನೂನು ಕ್ರಮದ ವಾರ್ನಿಂಗ್ ಕೊಟ್ಟ ನಟ ಮೃಣಾಲ್ ಠಾಕೂರ್

ಗಜಿನಿ, ಗಜ ಸೇರಿದಂತೆ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದ ಬಹುಭಾಷಾ ನಟ ಪ್ರದೀಪ್ ರಾವತ್‌ ಇನ್ನಿಲ್ಲ

ನಟ ಧ್ರುವ ವಿಕ್ರಮ್ ಜತೆಗಿನ ಬ್ರೇಕಪ್ ವದಂತಿ ಬಗ್ಗೆ ಮೌನ ಮುರಿದ ನಟಿ ಅನುಪಮಾ ಪರಮೇಶ್ವರನ್

ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಗೆ ಡಬಲ್‌ ಧಮಾಕಾ: ರಾಮಾಯಾಣ ಟ್ರೈಲರ್‌ ಆಯ್ತು, ಈಗ ಟಾಕ್ಸಿಕ್‌ ಸರದಿ

ಬಿಗ್​​ಬಾಸ್ ರಿಯಾಲಿಟಿ ಶೋ ಮೊದಲ ಪ್ರೋಮೊ ಬಿಡುಗಡೆ: ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದ ಸುದೀಪ್‌

ಮುಂದಿನ ಸುದ್ದಿ
Show comments