Select Your Language

Notifications

webdunia
webdunia
webdunia
webdunia

ಇಂದಿಗೆ ನಟ ದರ್ಶನ್ ಜೈಲು ಸೇರಿ 100ದಿನ

Darshan

Sampriya

ಬೆಂಗಳೂರು , ಬುಧವಾರ, 18 ಸೆಪ್ಟಂಬರ್ 2024 (17:40 IST)
ಬೆಂಗಳೂರು: ಹೊರಗಡೆ ಐಷರಾಮಿ ಜೀವನ ಮಾಡುತ್ತಾ ಬಾಕ್ಸ್‌ಆಫೀಸ್ ಸುಲ್ತಾನ ಎಂದೇ ಕರೆಸಿಕೊಳ್ಳುವ ನಟ ದರ್ಶನ್ ಅವರು ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಇಂದಿಗೆ 100ದಿನ ತುಂಬಿದೆ. ಯಾವಾಗಲೂ ಸಿನಿಮಾ ಶೂಟಿಂಗ್, ಹೊಸಬರ ಸಿನಿಮಾ ಲಾಂಚ್ ಹೀಗೇ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಬ್ಯುಸಿಯಿರುತ್ತಿದ್ದ ದರ್ಶನ್ ಇದೀಗ ಬಳ್ಳಾರಿ ಜೈಲಿನಲ್ಲಿ ದಿನದೂಡಲು ಪರದಾಡುತ್ತಿದ್ದಾರೆ.

ಸದ್ಯ ಅವರ ಬೇಲ್ ಪಡೆದು ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಮನೆಯೂಟ ಸಿಗದೆ, ಬಳ್ಳಾರಿ ಜೈಲಿನಲ್ಲಿ ಕುಳಿತು ಕೊಳ್ಳಲು ಚೇರ್ ಇಲ್ಲದೆ, ಸಮಯ ಕಳೆಯಲು ಟಿವಿ ಇಲ್ಲದೆ ಪರಿತಪಿಸುತ್ತಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಇದುವರೆಗೆ ದರ್ಶನ್‌ ಬೇಲ್‌ಗಾಗಿ ಅರ್ಜಿ ಸಲ್ಲಿಸಿಲ್ಲ.

ಇವರ ಅಭಿಮಾನಿಗಳು ಆದಷ್ಟು ಬೇಗ ಈ ಪ್ರಕರಣದಿಂದ ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಇನ್ನೇನು ದರ್ಶನ್ ಅವರ ಪರ ವಕೀಲರು ಬೇಲ್‌ಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಡಂತೆ ನಡೆದರೆ ದರ್ಶನ್ ದಸರಾ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂಬ ಚರ್ಚೆಯಿದೆ.  ನಿನ್ನೆ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿದ್ದು, ಈ ವೇಳೆ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ಆರೋಪಿ ವಿನಯ್ ಮೊಬೈಲ್‌ ಅನ್ನು ಮತ್ತೇ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅದರ ವರದಿ ಬಂದ್ಮೇಲೆ ಅಷ್ಟೇ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಫೋಟೋ ನಕಲಿ: ದರ್ಶನ್ ಕೇಸ್ ಗೆ ಸಿಗುತ್ತಾ ಟ್ವಿಸ್ಟ್