Webdunia - Bharat's app for daily news and videos

Install App

2000 ರೂ ನೋಟು ನಿಮ್ಮಲ್ಲಿ ಇನ್ನೂ ಇದೆಯೇ, ಇದನ್ನು ಮರಳಿಸುವುದು ಹೇಗೆ

Krishnaveni K
ಗುರುವಾರ, 2 ಜನವರಿ 2025 (10:46 IST)
Photo Credit: X
ಬೆಂಗಳೂರು: ನೋಟು ನಿಷೇಧದ ಸಂದರ್ಭದಲ್ಲಿ ಕೇಂದ್ರ ಸರ್ಕಾರ 2,000 ರೂ. ನೋಟು ಜಾರಿಗೆ ತಂದಿತ್ತು. ಆದರೆ ಮತ್ತೆ ಅದನ್ನು ಹಿಂಪಡೆದಿತ್ತು. ಹೀಗಾಗಿ ನಿಮ್ಮಲ್ಲಿ 2,000 ರೂ. ನೋಟಿದ್ದರೆ ಅದನ್ನು ಮರಳಿಸುವುದು ಹೇಗೆ ಎಂಬ ಚಿಂತೆಯೇ? ಇದಕ್ಕೆ ಇಲ್ಲಿದೆ ಪರಿಹಾರ.

2023 ರ ಮೇ 19 ರಂದು 2,000 ರೂ ನೋಟು ಹಿಂಪಡೆಯುವುದಾಗಿ ಆರ್ ಬಿಐ ಘೋಷಣೆ ಮಾಡಿತ್ತು. ಆರ್ ಬಿಐ ಘೋಷಿಸಿದ ಬಳಿಕ 3.56 ಲಕ್ಷ ಕೋಟಿ ನೋಟುಗಳು ಚಲಾವಣೆಯಲ್ಲಿದ್ದವು. ಈಗಾಗಲೇ ಶೇ.98 ರಷ್ಟು 2000 ರೂ. ನೋಟು ಹಿಂಪಡೆದಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಣೆ ಮಾಡಿದೆ. ಇದೀಗ ಕೇವಲ 6,691 ಕೋಟಿ ರೂ. ನೋಟು ಹಿಂದಿರುಗಿಸಲು ಬಾಕಿಯಿದೆ.

2023 ಅಕ್ಟೋಬರ್ ರವರೆಗೆ ನಿಮ್ಮಲ್ಲಿರುವ 2,000 ನೋಟು ಬ್ಯಾಂಕ್ ನಲ್ಲಿ ಠೇವಣಿ ಇಡಲು ಅವಕಾಶ ನೀಡಲಾಗಿತ್ತು. ಆ ಬಳಿಕ 19 ವಿತರಣಾ ಕಚೇರಿಗಳಲ್ಲಿ ನೋಟು ವಾಪಸಾತಿಗೆ ಅವಕಾಶ ನೀಡಲಾಗಿತ್ತು. ಹಾಗಿದ್ದರೂ ಇನ್ನೂ ಕೆಲವರಲ್ಲಿ 2,000 ರೂ ನೋಟು ಬಾಕಿಯಿದೆ.

ಇಂತಹವರಿಗಾಗಿ ದೇಶದ ಕೆಲವು ಕೇಂದ್ರಗಳಲ್ಲಿ ಠೇವಣಿ ನೀಡಲು ಅವಕಾಶ ನೀಡಲಾಗಿದೆ. ಅದರಲ್ಲಿ ಬೆಂಗಳೂರೂ ಒಂದಾಗಿದೆ. ಬೆಂಗಳೂರು ಅಲ್ಲದೆ ಆರ್ ಬಿಐನ ಅಹಮ್ಮದಾಬಾದ್, ಚೆನ್ನೈ, ಚಂಢೀಘಡ, ಬೇಲಾಪುರ, ಭೋಪಾಲ್, ಭುವನೇಶ್ವರ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು-ಕಾಶ್ಮೀರ,  ಕೋಲ್ಕತ್ತಾ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ತಿರುವನಂತರಪುರಂ ಕಚೇರಿಗಳಿಗೆ ತೆರಳಿ ವಿನಿಯಮ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments